ಕರ್ನಾಟಕ

karnataka

ETV Bharat / state

ಬಳ್ಳಾರಿ ಪೊಲೀಸರ ಕಾರ್ಯಾಚರಣೆ: 62 ಲಕ್ಷ ರೂ ಮೌಲ್ಯದ ನಗ,ನಾಣ್ಯ ವಶ - Bellary police seized Rs 62 lakh worth

2017 ರಿಂದ 2019ರ ವರೆಗೆ ನಡೆದ ಸರಣಿ ಕಳ್ಳತನ ಪ್ರಕರಣದ ಬೆನ್ನು ಹತ್ತಿದ ಬಳ್ಳಾರಿ ಪೊಲೀಸರು ಒಟ್ಟು 14 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಹಣ ಒಡವೆ ಸೇರಿದಂತೆ ಒಟ್ಟು 62 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸರಣಿ ಕಳ್ಳತನದ ಬೆನ್ನು ಹತ್ತಿದ ಬಳ್ಳಾರಿ ಪೊಲೀಸರು

By

Published : Oct 17, 2019, 2:12 PM IST

ಬಳ್ಳಾರಿ:ಜಿಲ್ಲೆಯ ಹೊಸಪೇಟೆ ನಗರದಲ್ಲಿ ಮನೆಗಳ್ಳತನ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಕಳುವಾದ ಅಂದಾಜು 62 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗು ನಗದು ವಶಕ್ಕೆ ಪಡೆದಿದ್ದಾರೆ.

ಕಳೆದ ಸೆಪ್ಟೆಂಬರ್ 17ರಂದು ಹೊಸಪೇಟೆ ಅರವಿಂದ ನಗರದ ನಿವಾಸಿ ಗುರುರಾಜ ಎಂಬುವವರ ಮನೆಯ ತಿಜೋರಿಯಲ್ಲಿದ್ದ ಸರಿಸುಮಾರು 9 ಲಕ್ಷ ರೂ ನಗದು ಹಾಗೂ ಅಂದಾಜು 1 ಕೆ.ಜಿ. 220 ಗ್ರಾಂ ತೂಕದ ಬಂಗಾರದ ಆಭರಣ ಕಳುವಾಗಿತ್ತು. ಈ ಪ್ರಕರಣ ಬೇಧಿಸೋದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೆಚ್ಚುವರಿ ಎಸ್ಪಿ ಲಾವಣ್ಯ ಹಾಗೂ ಹೊಸಪೇಟೆ ನಗರ ಡಿವೈಎಸ್ಪಿ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ, ವಿಶೇಷ ಕಾರ್ಯಾಚರಣೆ ಮಾಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ತಿಳಿಸಿದ್ದಾರೆ.

ಸರಣಿ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಬಳ್ಳಾರಿ ಪೊಲೀಸರು

ಬೆಂಗಳೂರು ಮೂಲದ ಸಚಿನ್, ಹೊಸಪೇಟೆಯ ದರ್ಶನ್ ಮತ್ತು ಗೋಣಿ ಬಸಪ್ಪ ಸೇರಿದಂತೆ ಐವರೂ ಮಹಿಳೆಯರನ್ನು ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9 ಲಕ್ಷ ರೂ ನಗದು ಸೇರಿದಂತೆ ಒಟ್ಟಾರೆ 47,80,000 ರೂ.ಗಳ ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ರು.

ಹೊಸಪೇಟೆ ನಗರದ ನಾನಾ ಕಡೆ 2017 ರಿಂದ 2019ರ ವರೆಗೆ ಸರಗಳ್ಳತನ, ಬೈಕ್ ಕಳವು, ಮನೆಗಳ್ಳತನ ಪ್ರಕರಣಗಳು ನಡೆದಿದ್ದವು.

ABOUT THE AUTHOR

...view details