ಕರ್ನಾಟಕ

karnataka

By

Published : Aug 31, 2020, 6:27 PM IST

ETV Bharat / state

ಪಾಲಿಕೆಯಿಂದ ಮೂರು ಟ್ರ್ಯಾಕ್ಟರ್ ಪ್ಲಾಸ್ಟಿಕ್ ವಶ; 25 ಸಾವಿರ ದಂಡ ಹಾಕಿದ ಆಯುಕ್ತೆ

ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಪೇಪರ್, ಬ್ಯಾಗ್, ಕಪ್​ಗಳನ್ನು ಬಳ್ಳಾರಿ ಮಹಾನಗರ ಪಾಲಿಕೆ ವಶಪಡಿಸಿಕೊಂಡಿದೆ.

Bellary
ಬಳ್ಳಾರಿ

ಬಳ್ಳಾರಿ: ಮಹಾನಗರ ಪಾಲಿಕೆ ಆಯುಕ್ತೆ ಮೂರು ಟ್ರ್ಯಾಕ್ಟರ್​ಗಳಲ್ಲಿ ಪ್ಲಾಸ್ಟಿಕ್ ಪೇಪರ್, ಬ್ಯಾಗ್, ಕಪ್​ಗಳನ್ನು ಸೀಸ್​ ಮಾಡಿ, 25 ಸಾವಿರ ರೂ. ದಂಡ ಹಾಕಿದ ಘಟನೆ ಹೂವಿನ ಬಜಾರ್​ನಲ್ಲಿ ನಡೆದಿದೆ.

ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡ ಪಾಲಿಕೆ

ಗಣಿನಾಡು ಬಳ್ಳಾರಿ ನಗರದ ಹೂವಿನ ಬಜಾರ್ ಎದುಗಡೆ ಇರುವ ಗ್ರಹಾಂ ರಸ್ತೆಯಲ್ಲಿ ಇರುವ ಹಲವಾರು ಅಂಗಡಿಗಳಲ್ಲಿ‌ ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್ ಪೇಪರ್, ಬ್ಯಾಗ್, ಕಪ್​ಗಳನ್ನು ಸೀಸ್​ ಮಾಡಿದರು.

ಈ ಸಮಯದಲ್ಲಿ ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ‌ ಮಾತನಾಡಿದ, ಆಯುಕ್ತೆ ತುಷಾರಮಣಿ ಅವರು, ಬಹಳ ದಿನಗಳ ನಂತರ ಮತ್ತೆ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಪೇಪರ್, ಬ್ಯಾಗ್, ಕಪ್​ಗಳನ್ನು ವಶಪಡಿಸಿಕೊಂಡಿದ್ದೇವೆ. ಒಟ್ಟು ಮೂರು ಟ್ರ್ಯಾಕ್ಟರ್​ಗಳಲ್ಲಿ ಪ್ಯಾಸ್ಟಿಕ್ ಪೇಪರ್, ಬ್ಯಾಗ್, ಕಪ್​ಗಳನ್ನು ಸೀಜ್ ಮಾಡಿ, 25 ಸಾವಿರ ರೂ. ದಂಡವನ್ನು ಸಹಾ ಹಾಕಿದ್ದೇವೆ ಎಂದರು.

ಈ‌ ಸಮಯದಲ್ಲಿ ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್​ಪೆಕ್ಟರ್​ಗಳು ಹಾಜರಿದ್ದರು.

ABOUT THE AUTHOR

...view details