ಕರ್ನಾಟಕ

karnataka

ETV Bharat / state

ಎಲ್ಲೆಲ್ಲೂ ಮಿತಿ ಮೀರಿದ ಕರಡಿ ಕಾಟ : ಬೆಚ್ಚಿಬಿದ್ದ ಸ್ಥಳೀಯರು! - ಸಂಡೂರಿನ ತೋರಣಗಲ್ ಬಳಿಯ ಜಿಂದಾಲ್ ಕಾರ್ಖಾನೆಯಲ್ಲಿ ಹಾಡಹಗಲೇ ಕರಡಿ ಪ್ರತ್ಯಕ್ಷ

ಕರಡಿಗೆ ಅರವಳಿಕೆ ಕೊಟ್ಟು ಮೇಲೆ ತರಲು ಮುಂದಾಗಿದ್ದಾರೆ. ಗ್ರಾಮಕ್ಕೆ ಇಂದು ಬೆಳಗ್ಗೆ ಮೂರು ಕರಡಿಗಳು ಬಂದಿದ್ದವು. ಇದರಲ್ಲಿ ಒಂದು ಕರಡಿ ಮನೆಯೊಳಗೆ ನುಗ್ಗಿತ್ತು. ಅರಣ್ಯ ಇಲಾಖೆಯವರು ಬಲೆ ಹಾಕಿ ಹಿಡಿಯಲು ಮುಂದಾಗಿದ್ದರು. ಈ ವೇಳೆ ಮನೆಯಿಂದ ತಪ್ಪಿಸಿಕೊಂಡು ಹೋಗಿ ಪಾಳು ಬಾವಿಗೆ ಬಿದ್ದಿದೆ..

ಬಳ್ಳಾರಿಯಲ್ಲಿ ಮಿತಿ ಮೀರಿದ ಕರಡಿ ಕಾಟ
ಬಳ್ಳಾರಿಯಲ್ಲಿ ಮಿತಿ ಮೀರಿದ ಕರಡಿ ಕಾಟ

By

Published : Jun 27, 2022, 5:53 PM IST

Updated : Jun 27, 2022, 7:29 PM IST

ಬಳ್ಳಾರಿ/ವಿಜಯನಗರ :ಸಂಡೂರಿನ ತೋರಣಗಲ್ ಬಳಿಯ ಜಿಂದಾಲ್ ಕಾರ್ಖಾನೆಯಲ್ಲಿ ಹಾಡಹಗಲೇ ಕರಡಿ ಪ್ರತ್ಯಕ್ಷವಾಗಿ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಜಿಂದಾಲ್​​​ನ ಆರ್‌ಎಂಎಸ್‌ಹೆಚ್‌ ಬಳಿಯಲ್ಲಿ ಕರಡಿ ಕಂಡು ಕಾರ್ಮಿಕರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಇನ್ನು ಕರಡಿ ಓಡಸಲು ಸೆಕ್ಯುರಿಟಿ ಗಾರ್ಡ್‌ಗಳು ಹರಸಾಹಸ ಪಟ್ಟಿದ್ದಾರೆ.

ವಿಜಯನಗರದಲ್ಲೂ ಸಹ ಕರಡಿ ಹಾವಳಿ ಮಿತಿಮೀರಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕರಡಿಯೊಂದು ಪಾಳು ಬಾವಿಯೊಳಗೆ ಬಿದ್ದಿದೆ. ಘಟನೆ ಕೂಡ್ಲಿಗಿ ತಾಲೂಕಿನ ಮಡ್ಲಾಕನಹಳ್ಳಿ ಗ್ರಾಮದಲ್ಲಿ ಬಳಿ ನಡೆದಿದೆ. ಪಾಳು ಬಾವಿಯೊಳಗೆ ಬಿದ್ದಿರುವ ಕರಡಿ ರಕ್ಷಣೆಗೆ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿದ್ದಾರೆ.

ಎಲ್ಲೆಲ್ಲೂ ಮಿತಿ ಮೀರಿದ ಕರಡಿ ಕಾಟ : ಬೆಚ್ಚಿಬಿದ್ದ ಸ್ಥಳೀಯರು!

ಕರಡಿಗೆ ಅರವಳಿಕೆ ಕೊಟ್ಟು ಮೇಲೆ ತರಲು ಮುಂದಾಗಿದ್ದಾರೆ. ಗ್ರಾಮಕ್ಕೆ ಇಂದು ಬೆಳಗ್ಗೆ ಮೂರು ಕರಡಿಗಳು ಬಂದಿದ್ದವು. ಇದರಲ್ಲಿ ಒಂದು ಕರಡಿ ಮನೆಯೊಳಗೆ ನುಗ್ಗಿತ್ತು. ಅರಣ್ಯ ಇಲಾಖೆಯವರು ಬಲೆ ಹಾಕಿ ಹಿಡಿಯಲು ಮುಂದಾಗಿದ್ದರು. ಈ ವೇಳೆ ಮನೆಯಿಂದ ತಪ್ಪಿಸಿಕೊಂಡು ಹೋಗಿ ಪಾಳು ಬಾವಿಗೆ ಬಿದ್ದಿದೆ.

ಇದನ್ನೂ ಓದಿ : ಮರದಿಂದ ತೊರೆಯಂತೆ ಹರಿದು ಬರುತ್ತಿದೆಯಂತೆ ನೀರು : ಪವಾಡವೆಂದು ಭಾವಿಸಿ ನೂರಾರು ಜನ ಬಂದರು!

Last Updated : Jun 27, 2022, 7:29 PM IST

ABOUT THE AUTHOR

...view details