ಕರ್ನಾಟಕ

karnataka

By

Published : Jul 13, 2020, 8:02 PM IST

ETV Bharat / state

ಅಂತಾರಾಜ್ಯ ಚೆಕ್​​​ಪೋಸ್ಟ್​​​ಗಳಲ್ಲಿ ಸೌಕರ್ಯ ಕೊರತೆ; ಸಿಬ್ಬಂದಿ ಪರದಾಟ

ಬಳ್ಳಾರಿ ಜಿಲ್ಲಾಡಳಿತ ಎತ್ತಿನಬೂದಿಹಾಳ್ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿರುವ ಚೆಕ್​​​ಪೋಸ್ಟ್​​​​​ನಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಸಿಬ್ಬಂದಿ ನಾನಾ ಅವಸ್ಥೆ ಪಡುತ್ತಿದ್ದಾರೆ. ಅಲ್ಲದೆ ಹಾವು-ಚೇಳುಗಳ ಕಾಟವೂ ಹೆಚ್ಚಾಗಿದೆ.

check Post
ಅಂತಾರಾಜ್ಯ ತಾತ್ಕಾಲಿಕ ಚೆಕ್​​​ಪೋಸ್ಟ್​​​

ಬಳ್ಳಾರಿ: ತಾಲೂಕಿನ ಎತ್ತಿನಬೂದಿಹಾಳ್​​​​​ನಲ್ಲಿ ನಿರ್ಮಿಸಿರುವ ಅಂತಾರಾಜ್ಯ ತಾತ್ಕಾಲಿಕ ಚೆಕ್​​​ಪೋಸ್ಟ್​​​ನಲ್ಲಿ ಉರಗ ಕಾಟ. ಮತ್ತೊಂದು ಚೆಕ್​​​​ಪೋಸ್ಟ್​​​​​​ನಲ್ಲಿ ಇಲ್ಲಗಳದ್ದೇ ಸಮಸ್ಯೆ!

ನೆರೆಯ ಆಂಧ್ರಪ್ರದೇಶದ ಅನಂತಪುರಂ, ಕರ್ನೂಲ್ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ಹೆಚ್ಚಾದ ಹಿನ್ನೆಲೆಯಲ್ಲಿ ಗಡಿಭಾಗದ ಹಳ್ಳಿಗಳಿಂದ ಜನ ಗಣಿನಾಡಿಗೆ ಪ್ರವೇಶಿಸುತ್ತಿದ್ದರು. ಅದನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾಡಳಿತ ಎತ್ತಿನಬೂದಿಹಾಳ್ ಗ್ರಾಮದ ಹೊರವಲಯದಲ್ಲಿ ಚೆಕ್​​​ಪೋಸ್ಟ್ ನಿರ್ಮಿಸಿದೆ. ಆದರೆ ಅಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲ.

ಚೆಕ್​​​ಪೋಸ್ಟ್​​​​ಗಾಗಿ ನಿರ್ಮಿಸಿರುವ ಶೆಡ್​​​​ನಲ್ಲಿ ಕುರ್ಚಿ, ಟೇಬಲ್ ಮಾತ್ರ ಇದೆ. ಮಳೆ ಬಂದರೆ ಚೆಕ್​​ಪೋಸ್ಟ್​​ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ‌ ಮತ್ತು ಸಿಬ್ಬಂದಿ ಪಡಬಾರದ ಕಷ್ಟಪಡುತ್ತಿದ್ದಾರೆ. ಶೆಡ್​​ ಸೋರುತ್ತದೆ ಹಾಗೂ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ‌ಕಡಿತಗೊಂಡಾಗ ಹಾವು-ಚೇಳುಗಳ‌ ಕಾಟ ಹೆಚ್ಚಾಗಿದೆ. ಹೀಗಾಗಿ ಸಿಬ್ಬಂದಿ ಭೀತಿಯಿಂದ ದಿನ ಕಳೆಯುವಂತಾಗಿದೆ.

ಗಡಿಭಾಗದ ಅಂತಾರಾಜ್ಯ ಚೆಕ್​​​ಪೋಸ್ಟ್

ಅನುಪಯುಕ್ತ ಚೆಕ್​​​ಪೋಸ್ಟ್: ಈ ತಾತ್ಕಾಲಿಕ ಚೆಕ್​​​ಪೋಸ್ಟ್ ಬಳಿಯೇ ಮತ್ತೊಂದು ಚೆಕ್​ಪೋಸ್ಟ್ ಕಟ್ಟಡವಿದೆ. ಆದರೆ, ಅದೀಗ ಸಂಪೂರ್ಣವಾಗಿ ಪಾಳುಬಿದ್ದಿದೆ. ಎರಡು ಕೊಠಡಿಯುಳ್ಳ ಈ ಕಟ್ಟಡದಲ್ಲಿ ಅತ್ಯಾಧುನಿಕ ಸೌಲಭ್ಯ ಇವೆಯಾದರೂ ಬಳಕೆಗೆ ಮಾತ್ರ ಜಿಲ್ಲಾಡಳಿತವಾಗಲೀ ಅಥವಾ ಎತ್ತಿನಬೂದಿಹಾಳ್ ಗ್ರಾಮ ಪಂಚಾಯಿತಿಯಾಗಲೀ ಮುಂದಾಗಿಲ್ಲ.

ಪಾಳು ಬಿದ್ದ ಶೆಡ್ ಅನ್ನು ಸಕ್ರಿಯಗೊಳಿಸಲು‌ ಜಿಲ್ಲಾಡಳಿತ ಕ್ರಮವಹಿಸಬೇಕು.‌ ಅದರಿಂದ ಚೆಕ್​​​​​ಪೋಸ್ಟ್​​​​ನಲ್ಲಿ‌ ಕರ್ತವ್ಯ ನಿರ್ವಹಿಸುವವರಿಗೆ ಸಾಕಷ್ಟು ಅನುಕೂಲ‌ ಆಗಲಿದೆ ಎಂದು ಚೆಕ್​​​ಪೋಸ್ಟ್​​​ನ ಅಧಿಕಾರಿಗಳು ಮನವಿ ಮಾಡಿದ್ದಾರೆ.

ABOUT THE AUTHOR

...view details