ಕರ್ನಾಟಕ

karnataka

ETV Bharat / state

'ಶೀಘ್ರವೇ ಜನಾರ್ದನ ರೆಡ್ಡಿಯ ಗತ ವೈಭವ ಮರುಕಳಿಸಲಿದೆ' - janardana reddy

ಇಂದು ಗಾಲಿ ಜನಾರ್ದನ ರೆಡ್ಡಿ ಮನೆಗೆ ಶ್ರೀಶೈಲ ಹಾಗೂ ಕಾಶೀ ಪೀಠದ ಜಗದ್ಗುರುಗಳು ಆಮಿಸಿದ್ದು ರೆಡ್ಡಿಗೆ ಆಶೀರ್ವಾದ ಮಾಡಿದ್ದಾರೆ. ಇನ್ನು ರೆಡ್ಡಿ ಕುಟುಂಬವು ಶ್ರೀಗಳ ಪಾದ ಪೂಜೆ ನಡೆಸಿದರು. ಈ ಸಮಯದಲ್ಲಿ ಮಾತನಾಡಿದ ಶ್ರೀಗಳು, ಜನಾರ್ದನ ರೆಡ್ಡಿಗೆ ಮತ್ತೆ ಗತ ವೈಭವ ಮರುಕಳಿಸಲಿದೆ ಎಂದು ಭವಿಷ್ಯ ನುಡಿದರು.

ಶೀಘ್ರವೇ ಜನಾರ್ದನರೆಡ್ಡಿಯ ಗತ ವೈಭವ ಮರುಕಳಿಸಲಿದೆ: ಜಗದ್ಗುರುಗಳ ಅಭಯ

By

Published : Jun 20, 2019, 6:36 PM IST

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮನೆಗೆ ಇಂದು ಶ್ರೀಶೈಲ ಹಾಗೂ ಕಾಶಿ ಪೀಠದ ಜಗದ್ಗುರುಗಳು ಭೇಟಿ ನೀಡಿದ್ದರು. ಜಗದ್ಗುರುಗಳು ಆಗಮಿಸುತ್ತಿದ್ದಂತೆಯೇ ಗಾಲಿ ಜನಾರ್ದನರೆಡ್ಡಿ ಕುಟುಂಬಸ್ಥರು ಶ್ರೀಗಳ ಪಾದಪೂಜೆ ನೆರವೇರಿಸಿದರು.

ಶ್ರೀಗಳಿಗೆ ಜನಾರ್ದನ ರೆಡ್ಡಿ ಕುಟುಂಬದಿಂದ ಪಾದ ಪೂಜೆ

ರೆಡ್ಡಿಗೆ ಶ್ರೀಗಳ ಅಭಯ: ಕಾಶಿ ಪೀಠದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರು‌ ಲಿಂಗ ಧಾರಣೆ ಮಾಡಿಕೊಂಡಿದ್ದರು. ಅವರು ಹೇಮರೆಡ್ಡಿ ಮಲ್ಲಮ್ಮನವರ ಅನುಯಾಯಿಗಳಾಗಿದ್ದಾರೆ. ಈ ದಿನ ಬೆಳಗ್ಗೆ ಲಿಂಗಪೂಜೆ, ಪಾದಪೂಜೆ ಆಗಿದೆ. ಈ ಮನೆಯಲ್ಲಿ ಸಂಸ್ಕೃತಿಯ ವಾತಾವರಣ ಸೃಷ್ಟಿಯಾಗಿದೆ. ರೆಡ್ಡಿಯವರು ದಶಕದಿಂದಲೂ ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಆ ಸಮಸ್ಯೆಯಿಂದ ಮುಕ್ತಿ ಹೊಂದಲಿದ್ದಾರೆ. ಶೀಘ್ರವೇ ಅವರ ಗತವೈಭವ ಮರುಕಳಿಸಲಿದೆ ಎಂದು ಕಾಶಿ ಪೀಠದ ಜಗದ್ಗುರು ಹಾರೈಸಿದ್ದಾರೆ.‌

ಸಾಮೂಹಿಕ ವಿವಾಹ ಮಹೋತ್ಸವದ ನಿಮಿತ್ತ ತಾವು ಬಳ್ಳಾರಿಗೆ ಬಂದಿದ್ದೆವು. ಈ ಹಿನ್ನೆಲೆಯಲ್ಲಿ ಇವತ್ತು ರೆಡ್ಡಿ ನಿವಾಸಕ್ಕೆ ಬಂದು ಪಾದಪೂಜೆ ಸ್ವೀಕರಿಸಿದೆವು. ರೆಡ್ಡಿಯವರು ಕಾಶಿ ಪೀಠದಲ್ಲಿ ಲಿಂಗ ಧಾರಣೆ ಮಾಡಿಕೊಂಡಿದ್ದರು. ಅಂದಿನಿಂದ ನಿಷ್ಠೆ ಭಕ್ತಿಯಿಂದ ಲಿಂಗ ಪೂಜೆ ಮಾಡ್ತಿದ್ದಾರೆ. ರೆಡ್ಡಿಯವರ ಕುಟುಂಬಕ್ಕೆ ಎಲ್ಲ ಒಳ್ಳೆಯದಾಗಲಿದೆ ಎಂದು ಶ್ರೀಗಳು ಆರ್ಶೀವದಿಸಿದ್ದಾರೆ.

ABOUT THE AUTHOR

...view details