ಕರ್ನಾಟಕ

karnataka

ETV Bharat / state

ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಪ್ರಕಟ: ಸದಸ್ಯರಿಗೆ ಗೋವಾ ಟೂರ್ ಆಫರ್​..!?

ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಬಿಜೆಪಿ- ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಪ್ರಮುಖ ಮುಖಂಡರು ಹಾಗೂ ಶಾಸಕರು, ಸಚಿವರು ಪಂಚಾಯಿತಿ ಸದಸ್ಯರಿಗೆ ಗೋವಾ ಟೂರ್ ಆಫರ್​ ನೀಡಿ ತಮ್ಮತ್ತ ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

By

Published : Jan 10, 2021, 12:35 PM IST

Ballari dist grapam president, vice president to go goa tour
ಗಣಿಜಿಲ್ಲೆಯ ಸದಸ್ಯರಿಗೆ ಗೋವಾ ಟೂರ್

ಬಳ್ಳಾರಿ: ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಗಣಿ ಜಿಲ್ಲೆಯಲ್ಲಿ ಆಯಾ ಗ್ರಾಮ ಪಂಚಾಯಿತಿಯ ಅಧಿಕಾರ ಹಿಡಿಯಲು ಮೂರು ರಾಜಕೀಯ ಪಕ್ಷಗಳು ಶತಾಯ ಗತಾಯ ಪ್ರಯತ್ನ ನಡೆಸಿವೆ.

ಬಿಜೆಪಿ- ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಪ್ರಮುಖ ಮುಖಂಡರು ಹಾಗೂ ಶಾಸಕರು, ಸಚಿವರು ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೋವಾ ಟೂರ್ ಆಮಿಷವೊಡ್ಡಿ ತಮ್ಮತ್ತ ಸೆಳೆಯಲು ಭಾರಿ ಕಸರತ್ತು ನಡೆಸಿವೆ. ಈ ಹಿನ್ನೆಲೆ ಇಂದು ಬಳ್ಳಾರಿ ತಾಲೂಕಿನ ನಾನಾ ಗ್ರಾಮ ಪಂಚಾಯಿತಿಗಳಲ್ಲಿ ಗೆದ್ದಿರುವ ಹತ್ತಾರು ಸದಸ್ಯರನ್ನು ಗೋವಾ ರಾಜ್ಯದ ಪ್ರವಾಸ ಕೈಗೊಳ್ಳಲು‌ ಕಾಂಗ್ರೆಸ್- ಬಿಜೆಪಿ ಪಕ್ಷಗಳು ನಿರ್ಧರಿಸಿವೆ.

ಇವತ್ತು ಆಯ್ದ ಸದಸ್ಯರನ್ನು ಗೋವಾಕ್ಕೆ ಕರೆದೊಯ್ದು ರಾಜಕೀಯ ಪಕ್ಷಗಳ ಮುಖಂಡರು ಆ ಸದಸ್ಯರಿಗೆ ಮೋಜು- ಮಸ್ತಿಯ ಜೊತೆಜೊತೆಗೆ ಕುದುರೆ ವ್ಯಾಪಾರಕ್ಕೂ ನಾಂದಿ ಹಾಡಲಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಇದನ್ನೂ ಓದಿ:ಅಂಜನಾದ್ರಿ ಶಿಲಾಪೂಜೆಗೆ ಆಗಮಿಸಿದ ರಾಜ್ಯಪಾಲ ವಜುಭಾಯಿ ವಾಲಾ

For All Latest Updates

TAGGED:

ABOUT THE AUTHOR

...view details