ಕರ್ನಾಟಕ

karnataka

By

Published : Jul 23, 2019, 8:26 PM IST

ETV Bharat / state

ಸೋನಾ‌ ಮಸೂರಿ ಅಕ್ಕಿ ಉಣಬಡಿಸುವಂತೆ ಆಗ್ರಹ; ಹಾಸ್ಟೆಲ್‌ನ ವಿದ್ಯಾರ್ಥಿನಿಯರ ಪ್ರತಿಭಟನೆ

ಸೋನಾ ಮಸೂರಿ ಅಕ್ಕಿಯಲ್ಲಿ ಅನ್ನ ಮಾಡಿ ಉಣಬಡಿಸುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.

ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿನಿಯರು ಪ್ರತಿಭಟನೆ

ಬಳ್ಳಾರಿ:ಪಡಿತರ ಚೀಟಿಯ ಫಲಾನುಭವಿಗಳಿಗೆ ಕೊಡಮಾಡುವ ಅಕ್ಕಿಯ ಬದಲಿಗೆ ಸೋನಾ ಮಸೂರಿ ಅಕ್ಕಿನೇ ಉಣಬಡಿಸಬೇಕೆಂದು ಆಗ್ರಹಿಸಿ ಪರಿಶಿಷ್ಟ ಪಂಗಡ ವರ್ಗದ ವಿದ್ಯಾರ್ಥಿನಿಯರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿನಿಯರು ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿಯ ಎದುರು ಸೇರಿದ ನೂರಾರು ವಿದ್ಯಾರ್ಥಿನಿಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ಸರ್ಕಾರದ ಆದೇಶದನ್ವಯ ಪರಿಶಿಷ್ಟ ಪಂಗಡ‌ ಸಮುದಾಯದ ಹಾಸ್ಟೆಲ್ ವಾರ್ಡನ್‌ ತಮ್ಮ ಕರ್ತವ್ಯವನ್ನು ಪಾಲಿಸಿದ್ದಾರೆ. ಆ ಪ್ರಕಾರವೇ ಪಡಿತರ ಚೀಟಿಯ ಫಲಾನುಭವಿಗಳಿಗೆ ಕೊಡ ಮಾಡುವ ಪಡಿತರ ಅಕ್ಕಿನಾ ಉಣಬಡಿಸಲಾಗುತ್ತದೆ. ಸೋನಾ ಮಸೂರಿ ಅಕ್ಕಿಯ ವಿತರಣೆ ಪ್ರಸ್ತಾವನೆ ಸದ್ಯಕ್ಕಿಲ್ಲ. ಆಯ್ತು ನೋಡೋಣ ಎಂಬ ಮಾತನ್ನು ಜಿಲ್ಲಾಧಿಕಾರಿ ಪರವಾಗಿ‌ ಮನವಿ ಪತ್ರ ಸ್ವೀಕರಿಸಿದ ಅಧಿಕಾರಿಯೋರ್ವರು ನೀಡಿದರು.

ABOUT THE AUTHOR

...view details