ಕರ್ನಾಟಕ

karnataka

By

Published : Aug 21, 2020, 12:17 PM IST

ETV Bharat / state

ಧುಮ್ಮಿಕ್ಕಿ ಹರಿದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ವಿಜಯನಗರ ಆಣೆಕಟ್ಟು

ತುಂಗಭದ್ರಾ ಜಲಾಶಯದಿಂದ ನೀರು ಹರಿಸುತ್ತಿರುವ ಹಿನ್ನೆಲೆ ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟ ವಿಜಯನಗರ ಆಣೆಕಟ್ಟು ಮಿನಿ ಜಲಪಾತದಂತೆ ಗೋಚರಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

SDADS
ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ವಿಜಯನಗರ ಆಣೆಕಟ್ಟೆ

ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿಯಾಗಿರುವ ನೀರನ್ನು ನದಿಗೆ ಹರಿಬಿಡಲಾಗಿದೆ. ಈ ಹಿನ್ನೆಲೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದ ಬಳಿಯ ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟ ವಿಜಯನಗರ ಆಣೆಕಟ್ಟೆಯು ಮಿನಿ ಜಲಪಾತದಂತೆ ಭಾಸವಾಗುತ್ತಿದೆ.

ವಿಜಯನಗರ ಆಣೆಕಟ್ಟೆಯಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು, ಜನರ ಮನ ಸೆಳೆಯುತ್ತಿದೆ. ಗಂಗಮ್ಮನ ಕಟ್ಟೆಯ ಹಿನ್ನೀರಿನಿಂದ ವಿಶಾಲವಾಗಿ ಹರಿಯುತ್ತಿರುವ ಈ ನೀರು ಕಟ್ಟೆಯ ಮೇಲ್ಭಾಗದಿಂದ ಝರಿಯಾಗಿ ಧುಮ್ಮಿಕ್ಕಿ ಹರಿಯುತ್ತಿರುವುದನ್ನು ನೋಡುವುದೇ ರೋಮಾಂಚನವೆನಿಸುತ್ತಿದೆ.

ಜನ ಆಣೆಕಟ್ಟೆಯಲ್ಲಿ ಕಟ್ಲ, ರೋಹಿ, ಹಾವು ಮೀನು ಸೇರಿದಂತೆ ವಿವಿಧ ಜಾತಿಯ ಮೀನುಗಳನ್ನು ಬಲೆ ಬೀಸಿ ಹಿಡಿದು ಸ್ಥಳದಲ್ಲಿಯೇ ಬೆಂಕಿಯಲ್ಲಿ ಸುಟ್ಟು ಮೀನಿನ ರುಚಿ ಸವಿಯುತ್ತಿದ್ದಾರೆ.

ABOUT THE AUTHOR

...view details