ಕರ್ನಾಟಕ

karnataka

ETV Bharat / state

ನಾಡಿನಾದ್ಯಂತ ಬಕ್ರೀದ್ ಸಡಗರ.. ಗಡಿನಾಡಲ್ಲಿ ಕುರಿಗಳಿಗೆ ಹೆಚ್ಚಿದ ಬೇಡಿಕೆ.. - bakrid

ನಾಡಿನಾದ್ಯಂತ ಬಕ್ರೀದ್ ಹಬ್ಬ ಆಚರಣೆ ಹಿನ್ನಲೆ ಕುರಿ, ಮೇಕೆಗಳ ಮಾರಾಟ ಜೋರಾಗಿದೆ. ಗಡಿನಾಡು ಬಳ್ಳಾರಿಯಲ್ಲಿ ವಿವಿಧ ತಳಿಗಳ ಕುರಿಗಳು ಲಕ್ಷ ಲಕ್ಷ ರೂಪಾಯಿಗೆ ಮಾರಾಟವಾಗುತ್ತಿವೆ.

ನಾಡಿದಾದ್ಯಂತ ಬಕ್ರೀದ್ ಸಡಗರ: ಗಡಿನಾಡಲ್ಲಿ  ಕುರಿಗಳಿಗೆ ಹೆಚ್ಚಿದ ಬೇಡಿಕೆ.

By

Published : Aug 11, 2019, 7:01 PM IST

ಬಳ್ಳಾರಿ:ನಾಡಿನಾದ್ಯಂತ ನಾಳೆ( ಸೋಮವಾರ) ಬಕ್ರೀದ್ ಹಬ್ಬದ ಹಿನ್ನಲೆ ಕುರಿ, ಆಡುಗಳ ವ್ಯಾಪಾರ ರಂಗೇರಿದ್ದು ಗಡಿ ನಾಡು ಬಳ್ಳಾರಿಯಲ್ಲೂ ಭಾರಿ ಬೆಲೆಗೆ ಮಾರಾಟವಾಗುತ್ತಿವೆ.

ನಗರದ ಕೌಲ್‌ಬಜಾರ್ ಪ್ರದೇಶದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಎಂಟು ದಿನಗಳ ಮೊದಲೇ ಕುರಿಗಳ ಮಾರಾಟ ಆರಂಭಗೊಂಡಿದ್ದು, ವಿಭಿನ್ನ ತಳಿಯ ಕುರಿಗಳು 15 ಸಾವಿರದಿಂದ 1ಲಕ್ಷದವರೆಗೂ ಮಾರಾಟವಾಗುತ್ತಿವೆ.

ಕೌಲ್ ಬಜಾರ್‌ನ ಹಿರಿಯ ಕುರಿ ವ್ಯಾಪಾರಿ ವಾಜಿದ್ ಈ ಬಗ್ಗೆ ಮಾಹಿತಿ ನೀಡಿ, ಬಕ್ರೀದ್ ಹಬ್ಬದ ಪ್ರಯುಕ್ತ ಕಳೆದ 40 ವರ್ಷದಿಂದ ಕುರಿ ಮರಿಗಳ ಮಾರಾಟ ಮಾಡುತ್ತಾ ಬಂದಿದ್ದೇವೆ. ಕುರಿಗಳು ಚೆನ್ನಾಗಿದ್ದರೆ ಅವುಗಳಿಗೆ ಬೇಡಿಕೆ ಹೆಚ್ಚು, ಒಂದೊಂದು ಕುರಿಗಳಿಗೆ 15 ಸಾವಿರದಿಂದ 1 ಲಕ್ಷದವರೆಗೂ ಬೇಡಿಕೆ ಇದೆ. ಪ್ರತಿ ವರ್ಷ 20 ಕುರಿಗಳನ್ನು ಮಾರಾಟ ಮಾಡುತ್ತೇವೆ. ಬಕ್ರೀದ್ ಹಬ್ಬ ನಾಳೆ ದಿನ ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಕುರಿ ಮಾಂಸ ದೊರೆಯುತ್ತದೆ. ವ್ಯಾಪಾರ ಸಹ ಕಡಿಮೆ. ಯಾಕೆಂದರೆ, ಮುಸ್ಲಿಂ ಜನಾಂಗದವರು ಮನೆಯಲ್ಲಿ ಬಕ್ರೀದ್ ಹಬ್ಬಕ್ಕಾಗಿ ಎರಡು ‌ಮೂರು ಕುರಿಗಳ ಮಾಂಸದೂಟ ಮಾಡಿರುತ್ತಾರೆ ಎಂದು ತಿಳಿಸಿದರು.

ನಾಡಿದಾದ್ಯಂತ ಬಕ್ರೀದ್ ಸಡಗರ.. ಗಡಿನಾಡಲ್ಲಿ ಕುರಿಗಳಿಗೆ ಹೆಚ್ಚಿದ ಬೇಡಿಕೆ..

ಕುರಿಗಳ ಬೆಲೆ ಎಷ್ಟು?:

ಹಬ್ಬದ ಸಂದರ್ಭದಲ್ಲಿ ಕುರಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ. 15,000 ರೂಪಾಯಿ ನೀಡಿ ಒಂದು ಕುರಿ ಖರೀದಿಸಿದರೆ, 20 ರಿಂದ 25 ಕೆಜಿ ಮಾಂಸ ದೊರೆಯುತ್ತದೆ. 75,000 ದಿಂದ 1ಲಕ್ಷ ರೂಪಾಯಿವರೆಗಿನ ಕುರಿ ಖರೀದಿಸಿದರೆ, 45ರಿಂದ 50 ಕೆಜಿ‌ ಮಾಂಸ ದೊರೆಯುತ್ತದೆ. ಕುರಿಗಳಿಗೆ ಪ್ರತಿನಿತ್ಯ ಆಹಾರಕ್ಕಾಗಿ ಗೋಡಂಬಿ, ದ್ರಾಕ್ಷಿ, ಗೋಧಿ ಹೊಟ್ಟು, ಶೇಂಗಾ ಸಿಪ್ಪೆ ಇನ್ನಿತರ ಪೌಷ್ಟಿಕ ಪರ್ದಾರ್ಥಗಳನ್ನು ನೀಡಿಲಾಗುತ್ತದೆ. ಆದ್ದರಿಂದ ಅವುಗಳಿಗೆ ತುಸು ಬೇಡಿಕೆ ಹೆಚ್ಚು. ನಾವು ಬೇರೆ ಬೇರೆ ಕಡೆಗಳಿಂದ ಕುರಿಗಳನ್ನು ತಂದು ಕೌಲ್ ಬಜಾರ್‌ನಲ್ಲಿ ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು.

ಎಲ್ಲಿಂದ ಬರುತ್ತವೆ ದಷ್ಟಪುಷ್ಟ ಕುರಿಗಳು? :

ಇಷ್ಟೊಂದು ದಷ್ಟಪುಷ್ಟ ಕುರಿಗಳನ್ನು ಬಳ್ಳಾರಿ ಸುತ್ತಮುತ್ತ ಹಳ್ಳಿಗಳಿಂದ ಹಾಗೂ ಸಿಂಧನೂರು, ಹೊಸಪೇಟೆ, ಶಿವಮೊಗ್ಗ, ಬಾಗಲಕೋಟೆ, ರಾಂಪುರದ ಪ್ರದೇಶಗಳಿಂದ ತರಲಾಗುತ್ತದೆ ಎಂದರು.ಕುರಿ ಮಾಲೀಕ ಕೌಲ್ ಬಜಾರಿನ ವಾಸಿಂ ಮಾತನಾಡಿ, ಈ ಬಾರಿ ಬಕ್ರೀದ್ ಹಬ್ಬಕ್ಕೆ 24,000 ರೂಪಾಯಿ ಕೊಟ್ಟು ಕುರಿ ಖರೀದಿ ಮಾಡಿದ್ದೇನೆ. 20,000 ಸಾವಿರಕ್ಕಿಂತ ಹೆಚ್ಚು ಬೆಲೆ ನೀಡಿ ಖರೀದಿ ಮಾಡಿದರೇ ಕುರಿ ಚೆನ್ನಾಗಿರುತ್ತದೆ ಎಂದು ತಿಳಿಸಿದರು.

ಇನ್ನೋರ್ವ ಕುರಿ ಮಾಲೀಕ ಎಂ ಡಿ ಜಾವಿದ್ ಮಾತನಾಡಿ, ಈ ಬಾರಿ ಹಬ್ಬಕ್ಕೆ ₹ 40,000 ಕೊಟ್ಟು ಬಾಗಲಕೋಟೆ ಪ್ರದೇಶದ ಅಮ್ಮಿನ್‌ಗಡದಿಂದ ಕುರಿ ತೆಗೆದುಕೊಂಡು ಬಂದಿದ್ದೇವೆ. ಕಳೆದ ಎರಡು ವರ್ಷಗಳಿಂದ ಹಬ್ಬದ ಆಚರಣೆ ಮಾಡಿಲ್ಲ. ಮತ್ತೆ ಈ ಬಾರಿ ಬಕ್ರೀದ್ ಆಚರಣೆ ಮಾಡುತ್ತಿದ್ದೇವೆ ಎಂದರು.

ABOUT THE AUTHOR

...view details