ಕರ್ನಾಟಕ

karnataka

ETV Bharat / state

ಮರಳು ದಂಧೆಕೋರರಿಗೆ ನಡುಕ ಹುಟ್ಟಿಸಿದ ಡಿವೈಎಸ್​​ಪಿ: ಮೂವರ ಬಂಧನ - illegal sand mining

ಅಕ್ರಮ ಮರಳು ದಂಧೆ ನಡೆಸುವವರ ಮೇಲೆ ಪೊಲೀಸ್​​ ಸಬ್​​ ಇನ್ಸ್​​ಪೆಕ್ಟರ್​​ ಶಿವಕುಮಾರ್​​ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಈ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹರಳಿಯಾಳ ಗ್ರಾಮದಲ್ಲಿ ನಡೆದಿದೆ.

ಅಕ್ರಮ ಮರಳು ದಂಧೆ ಮೇಲೆ ದಾಳಿ

By

Published : Aug 1, 2019, 4:35 PM IST

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹರಳಿಯಾಳ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ನಡೆಸುವವರ ಮೇಲೆ ಪೊಲೀಸ್​​ ಸಬ್​​ ಇನ್ಸ್​​ಪೆಕ್ಟರ್​​ ನೇತೃತ್ವದಲ್ಲಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ.

ಚಾಲಕ ಗುರುಸ್ವಾಮಿ, ಸಣ್ಣಪ್ಪ ಹಾಗೂ ಟ್ರ್ಯಾಕ್ಟರ್​​ ಮಾಲೀಕರಾದ ಹನುಮಂತಪ್ಪ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ನಿರಂತರವಾಗಿ ಅಕ್ರಮ ಮರಳು ಕಳ್ಳ ಸಾಗಾಣಿಕೆಯಲ್ಲಿ ತೊಡಗಿಕೊಂಡಿದ್ದರು. ಹಾಗಾಗಿ ಕೂಡ್ಲಿಗಿ ಡಿವೈಎಸ್​ಪಿ ಶಿವಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಕಾರ್ಯಾಚರಣೆ ನಡೆಸಿ, ಅವರ ಮೇಲೆ ನಂಬರ್​​ 115/2019 ಮತ್ತು ಕಲಂ 379 ಐಪಿಸಿ ಅಡಿಯಲ್ಲಿ ಕೇಸ್​​ ದಾಖಲಿಸಲಾಗಿದೆ.

ಹೊಸಳ್ಳಿ ಠಾಣೆಯ ಸಬ್ಇನ್ಸ್​​ಪೆ​​​ಕ್ಟರ್ ನಾಗರಾಜ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇನ್ನಾದರೂ ಈ ತಾಲೂಕಿನಲ್ಲಿ ನಡೆಯುವ ಅಕ್ರಮಗಳನ್ನು ಅಧಿಕಾರಿಗಳು ತಡೆಯಲು ಮುಂದಾಗಿ ಸಾರ್ವಜನಿಕರಿಗೆ ಹಾಗೂ ಬಡವರಿಗೆ ನ್ಯಾಯ ಸಿಗುವಂತಾಗಲೆಂದು ತಾಲೂಕಿನ ಜನತೆ ಬಯಸುತ್ತಿದ್ದಾರೆ. ಅಲ್ಲದೆ ದಕ್ಷ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details