ಕರ್ನಾಟಕ

karnataka

ETV Bharat / state

ATMಗೆ ಹಾಕಲು ನೀಡಿದ್ದ 56 ಲಕ್ಷ ಹಣದೊಂದಿಗೆ ಪರಾರಿಯಾದ ವ್ಯಕ್ತಿಯ ಬಂಧನ - ATM money theft theif arrested by police

ಕರ್ನಾಟಕ ಬ್ಯಾಂಕ್ ಎಟಿಎಂಗೆ ಹಣ ತುಂಬಲು ನೀಡಿದ್ದ 56.18 ಲಕ್ಷ ರೂಪಾಯಿಯನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಳ್ಳಾರಿಯ ಬ್ರೂಸ್ ಪೇಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೀಲಕಂಠ ಎಂದು ಗುರುತಿಸಲಾಗಿದೆ.

atm-money-theft-theif-arrested-by-police
ATM ಗೆ ಹಾಕಲು ನೀಡಿದ್ದ 56 ಲಕ್ಷ ಹಣದೊಂದಿಗೆ ಪರಾರಿಯಾದ ವ್ಯಕ್ತಿಯ ಬಂಧನ

By

Published : May 23, 2022, 5:11 PM IST

ಬಳ್ಳಾರಿ: ಇಲ್ಲಿನ ಬ್ರೂಸ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಬ್ಯಾಂಕ್ ಎಟಿಎಂಗೆ ಹಣ ತುಂಬಲು ನೀಡಿದ್ದ 56.18 ಲಕ್ಷ ರೂಪಾಯಿಯನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಳ್ಳಾರಿಯ ಬ್ರೂಸ್ ಪೇಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೀಲಕಂಠ ಎಂದು ಗುರುತಿಸಲಾಗಿದೆ. ಕಳೆದ ಶನಿವಾರ ಈ ಘಟನೆ ನಡೆದಿದ್ದು, ಪ್ರಕರಣ ನಡೆದ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಬ್ರೂಸ್ ಪೇಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ATM ಗೆ ಹಾಕಲು ನೀಡಿದ್ದ 56 ಲಕ್ಷ ಹಣದೊಂದಿಗೆ ಪರಾರಿಯಾದ ವ್ಯಕ್ತಿಯ ಬಂಧನ

ಬಂಧಿತ ಆರೋಪಿ ಸಿ ಎಸ್ ಎಂ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಶನಿವಾರದಂದು ಕರ್ಣಾಟಕ ಬ್ಯಾಂಕ್ ನವರು, ಎಟಿಎಂಗೆ ಹಣ ಹಾಕಲು ಸುಮಾರು 50.18 ಲಕ್ಷ ರೂ. ಹಣ ನೀಡಿದ್ದರು. ಹಣ ಪಡೆದ ನೀಲಕಂಠ ಎಟಿಎಂಗೆ ಹಾಕಲು ನೀಡಿದ ಹಣದ ಜೊತೆಗೆ ಎಟಿಎಂನಲ್ಲಿದ್ದ 6 ಲಕ್ಷ ರೂಪಾಯಿ ತೆಗೆದು, ಒಟ್ಟು 56.18 ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದ.

ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಆರೋಪಿ ನೀಲಕಂಠನನ್ನು ಕೊಪ್ಪಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕದ್ದ ಹಣದಿಂದ ನೀಲಕಂಠ ಒಂದು ಮೊಬೈಲ್ ಖರೀದಿಸಿದ್ದು, ಮೊಬೈಲ್ ಸೇರಿದಂತೆ ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗುರು ಮೂರ್ತಿ ತಿಳಿಸಿದ್ದಾರೆ.

ಓದಿ :ಮೊಬೈಲ್ ಕೊಡಿಸಲಿಲ್ಲವೆಂದು ಮನನೊಂದ ಬಾಲಕಿ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ

ABOUT THE AUTHOR

...view details