ಕರ್ನಾಟಕ

karnataka

ETV Bharat / state

ಸಚಿವರಾಗ್ಲೇಬೇಕು ಅನ್ನೋ ಆಕಾಂಕ್ಷೆಯಿಂದ ನಾವು ರಾಜೀನಾಮೆ ಕೊಟ್ಟಿರಲಿಲ್ಲ: ಆನಂದ​ ಸಿಂಗ್

ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಕೊಟ್ಟ 17 ಶಾಸಕರು ಕೂಡ ನಾನಾ ಕಾರಣಗಳಿಂದ ರಾಜೀನಾಮೆ ನೀಡಿದ್ದೆವು. ಆದ್ರೆ ಸಚಿವ ಸ್ಥಾನದ ಬೇಡಿಕೆಯಿಂದಲೇ ರಾಜೀನಾಮೆ ನೀಡಿರಲಿಲ್ಲ ಎಂದು ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

By

Published : Jan 27, 2020, 4:37 PM IST

Updated : Jan 27, 2020, 4:46 PM IST

anand-singh-talking-about-to-minister-post
ಶಾಸಕ ಆನಂದ್​ ಸಿಂಗ್​

ಹೊಸಪೇಟೆ: ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಕೊಟ್ಟ 17 ಶಾಸಕರು ಕೂಡ ನಾನಾ ಕಾರಣಗಳಿಂದ ರಾಜೀನಾಮೆ ನೀಡಿದ್ದೇವೆಯೇ ಹೊರತು ಸಚಿವ ಸ್ಥಾನದ ಬೇಡಿಕೆಯಿಂದಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆ ಆಗಿದೆ ಎಂದು ನಾನು ರಾಜೀನಾಮೆ ನೀಡಿದ್ದೆ. ಸಚಿವ ಸ್ಥಾನದ ಬೇಡಿಕೆ ಇರಲಿಲ್ಲ, ಒಂದು ವೇಳೆ ವರಿಷ್ಠರುರು ತೀರ್ಮಾನಿಸಿ ಸಚಿವ ಸ್ಥಾನ ನೀಡಿದರೆ ಬೇಡ ಎನ್ನುವುದಿಲ್ಲ ಎಂದು ಶಾಸಕ ಆನಂದ್​ ಸಿಂಗ್​ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ನಮ್ಮ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಮುಖ್ಯಮಂತ್ರಿ ಅವರು ನಮಗೆ ಯಾವುದೇ ರೀತಿಯ ಅನ್ಯಾಯ ಮಾಡುವುದಿಲ್ಲ ಎನ್ನುವ ನಂಬಿಕೆ ನಮಗಿದೆ. ಅವರು ಯಾವುದೇ ಸ್ಥಾನ ಕೊಟ್ಟರೂ ಅದನ್ನು ಸ್ವೀಕರಿಸುತ್ತೇವೆ ಎಂದರು.

ಸಚಿವ ಸ್ಥಾನದ ಕುರಿತು ಶಾಸಕ ಆನಂದ್​ ಸಿಂಗ್​ ಪ್ರತಿಕ್ರಿಯೆ
ಸಚಿವ ಸ್ಥಾನ ಬೇಕೆ ಅಥವಾ ಜಿಲ್ಲೆ ಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಆನಂದ ಸಿಂಗ್​, ವಿಜಯನಗರವನ್ನು ಜಲ್ಲೆ ಮಾಡುವುದು ನನ್ನ ಬಹುದಿನಗಳ ಬೇಡಿಕೆ, ನನ್ನ ಮೊದಲ ಆದ್ಯತೆ ಇರುವುದು ಜಿಲ್ಲೆಗೆ. ವಿಜಯನಗರ ಜಿಲ್ಲೆಯೂ ಆಗುತ್ತದೆ, ನನಗೆ ಸಚಿವ ಸ್ಥಾನವೂ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Last Updated : Jan 27, 2020, 4:46 PM IST

ABOUT THE AUTHOR

...view details