ಕರ್ನಾಟಕ

karnataka

By

Published : Jan 16, 2020, 5:12 PM IST

ETV Bharat / state

ಉಚಿತ ಲ್ಯಾಪ್ ಟಾಪ್​ ವಿತರಿಸಲು ಆಗ್ರಹಿಸಿ ಎಐಡಿಎಸ್​​ಒ ಪ್ರತಿಭಟನೆ

ಪದವಿ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪ್ ಟಾಪ್​ ವಿತರಿಸಿ, ದ್ವೀತಿಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ‌ನ್ನು ಕಡೆಗಣಿಸಿದೆ. ಕೂಡಲೆ ಅವರಿಗೂ ಸಹ ಉಚಿತ ಲ್ಯಾಪ್ ಟಾಪ್​ ವಿತರಿಸಬೇಕೆಂದು ಆಗ್ರಹಿಸಿ ಎಐಡಿಎಸ್​ಒ ಪ್ರತಿಭಟನೆ ನಡೆಸಿದೆ.

aidso-protest-demanding-free-laptop-distribution
aidso-protest-demanding-free-laptop-distribution

ಬಳ್ಳಾರಿ: ರಾಜ್ಯದ ಎಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೂಡಲೇ ಉಚಿತ ಲ್ಯಾಪ್ ಟಾಪ್​ ವಿತರಿಸಬೇಕೆಂದು ಆಗ್ರಹಿಸಿ ಎಐಡಿಎಸ್​ಒ ಜಿಲ್ಲಾ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರ ಹಿಸಿದೆ.

ಉಚಿತ ಲ್ಯಾಪ್ ಟಾಪ್​ ವಿತರಿಸಲು ಆಗ್ರಹಿಸಿ ಎಐಡಿಎಸ್​​ಒ ಪ್ರತಿಭಟನೆ

ಬಳ್ಳಾರಿಯ ಇಂದಿರಾ ವೃತ್ತದ (ಸಂಗಮ್ಮ) ಬಳಿ ಎಐಡಿಎಸ್​ಒ ಜಿಲ್ಲಾ ಸಮಿತಿಯ ಅಧ್ಯಕ್ಷ ಜಿ.ಸುರೇಶ ಅವರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಜಮಾಯಿಸಿ ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಇಂದಿರಾ ವೃತ್ತದಿಂದ ಗಡಿಗಿ ಚನ್ನಪ್ಪ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಡಿಸಿಯವರಿಗೆ ಮನವಿಪತ್ರ ಸಲ್ಲಿಸಿದರು.

ಪದವಿ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪ್ ಟಾಪ್​ ವಿತರಿಸೋ ಮುಖೇನ ದ್ವೀತಿಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ‌ನ್ನು ಕಡೆಗಣಿಸಿದೆ. ಕೂಡಲೇ ಆ ವಿದ್ಯಾರ್ಥಿಗಳಿಗೂ ಕೂಡ ಈ ಉಚಿತ ಲ್ಯಾಪ್ ಟಾಪ್​ ಅನ್ನು ವಿತರಿಸಬೇಕೆಂದು ಆಗ್ರಹಿಸಿದ್ದಾರೆ.

ಎಐಡಿಎಸ್​ಒ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ರಾಜ, ಕಾರ್ಯದರ್ಶಿ ರವಿಕಿರಣ, ಸದಸ್ಯರಾದ ರಂಗಸ್ವಾಮಿ, ಮಂಜುನಾಥ, ಈರಣ್ಣ, ಶಾಂತಿ, ರವಿಕುಮಾರ, ರವಿಚಂದ್ರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ABOUT THE AUTHOR

...view details