ಕರ್ನಾಟಕ

karnataka

ಬೈಕ್​ಗೆ ಹಿಂಬದಿಯಿಂದ ಲಾರಿ ಡಿಕ್ಕಿ: ಸ್ಥಳದಲ್ಲೇ ಯುವಕ ಸಾವು

By

Published : Sep 26, 2020, 12:06 PM IST

ಕಾರ್ಪೆಂಟರ್​ ಸಾಮಾಗ್ರಿ ತರಲು ಬೈಕ್​ನಲ್ಲಿ ತೆರಳಿದ್ದ ಯುವಕನನ್ನು ಲಾರಿ ಬಲಿ ಪಡೆದಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

young man killed in road accident,  young man killed in road accident at Bellary, Bellary road accident, Bellary road accident news, ರಸ್ತೆ ಅಪಘಾತದಲ್ಲಿ ಯುವಕ ಸಾವು, ಬಳ್ಳಾರಿಯಲ್ಲಿ ರಸ್ತೆ ಅಪಘಾತದಲ್ಲಿ ಯುವಕ ಸಾವು, ಬಳ್ಳಾರಿ ರಸ್ತೆ ಅಪಘಾತ, ಬಳ್ಳಾರಿ ರಸ್ತೆ ಅಪಘಾತ ಸುದ್ದಿ,
ಬೈಕ್​ಗೆ ಹಿಂಬದಿಯಿಂದ ಲಾರಿ ಡಿಕ್ಕಿ

ಬಳ್ಳಾರಿ:ಬೈಕ್​ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪಿರುವ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಕುಡುತಿನಿ ತಾಲೂಕಿನ ಕೆಪಿಟಿಸಿಎಲ್ ಮತ್ತು ತೋರಣಗಲ್ಲು ಮಾರ್ಗ ಮಧ್ಯದಲ್ಲಿ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಶರ್ಮ್ಸ್​ವಲಿ (30) ಎಂದು ಗುರುತಿಸಲಾಗಿದೆ.

ಬೈಕ್​ಗೆ ಹಿಂಬದಿಯಿಂದ ಲಾರಿ ಡಿಕ್ಕಿ

ಕುಡುತಿನ ಹತ್ತಿರದ ಸುಲ್ತಾನ್​ಪುರ ಗ್ರಾಮದಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಶರ್ಮ್ಸ್​ವಲಿ, ಕೆಲಸಕ್ಕೆ ಬೇಕಾದ ಸಾಮಾಗ್ರಿ ತರಲು ತೋರಣಗಲ್ಲು ಪ್ರದೇಶಕ್ಕೆ ಬೈಕ್​ನಲ್ಲಿ ತೆರಳಿದ್ದಾನೆ. ಈ ವೇಳೆ ಬೈಕೆಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಶರ್ಮ್ಸ್​ವಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ಘಟನೆ ಕುರಿತು ಕುಡುತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ABOUT THE AUTHOR

...view details