ಕರ್ನಾಟಕ

karnataka

ವಿಶೇಷಚೇತನರಿಗಾಗಿ ಸ್ವಂತ ಹಣದಲ್ಲಿ ದಿನಸಿ ಕಿಟ್ ವಿತರಣೆ ಕಾರ್ಮಿಕ ಇಲಾಖೆ ಅಧಿಕಾರಿ

By

Published : Apr 19, 2020, 2:43 PM IST

ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದ ಸಿರಗುಪ್ಪ ತಾಲೂಕಿನ ರಾವಿಹಾಳ‌ ಗ್ರಾಮದ ವಿಕಲಚೇತನರು, ಹಿರಿಯರು, ವಿಧವೆಯರ ಕುಟುಂಬಗಳಿಗೆ ಆರ್.ಎ‌ನ್.ಶಿವರಾಜು ಎಂಬುವರು 20 ಸಾವಿರ ರೂ. ಖರ್ಚು ಮಾಡಿ ದಿನಸಿ ಕಿಟ್​ ವಿತರಿಸಿದರು.

handicapt-peoples
ಬಳ್ಳಾರಿ

ಬಳ್ಳಾರಿ:ಲಾಕ್​ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿಶೇಷಚೇತನರು, ಹಿರಿಯ ನಾಗರಿಕರು, ವಿಧವೆಯರ ಕುಟುಂಬಗಳಿಗೆ ಕಾರ್ಮಿಕ ಇಲಾಖೆ ಕಾರ್ಯನಿರ್ವಾಹಕ ಆರ್.ಎನ್.ಶಿವರಾಜು ಎಂಬುವರು ತಮ್ಮ ಸ್ವಂತ ಹಣದಲ್ಲಿ ಆಹಾರ ಪದಾರ್ಥಗಳ ಕಿಟ್​ ವಿತರಿಸಿದ್ದಾರೆ.

ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದ ಸಿರಗುಪ್ಪ ತಾಲೂಕಿನ ರಾವಿಹಾಳ‌ ಗ್ರಾಮದ ವಿಶೇಷಚೇತನರು, ಹಿರಿಯರು, ವಿಧವೆಯರ ಕುಟುಂಬಗಳಿಗೆ ಆರ್.ಎ‌ನ್. ಶಿವರಾಜು 20 ಸಾವಿರ ರೂ. ಖರ್ಚು ಮಾಡಿ ಅಕ್ಕಿ, ಬೇಳೆ, ಎಣ್ಣೆ, ಹಿಟ್ಟು, ಸಕ್ಕರೆ ಸೇರಿದಂತೆ ಅವಶ್ಯಕ ಆಹಾರ ಪದಾರ್ಥಗಳನ್ನು ಕಿಟ್​ಗಳ ಮೂಲಕ 100ಕ್ಕೂ ಹೆಚ್ಚು ಕುಟುಂಬಗಳಿಗೆ ವಿತರಿಸಿದರು.

ಬಳ್ಳಾರಿ

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಮುಂಚಿನಿಂದಲೂ ಈ ರೀತಿಯ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದೇನೆ. ಇದೀಗ ಊರಿನ ಜನರು ಅನುಭವಿಸುತ್ತಿರುವ ತೊಂದರೆ ಮನಗಂಡು ದಿನಸಿ ಕಿಟ್​​ಗಳನ್ನು ವಿತರಿಸುತ್ತಿದ್ದೇನೆ. ದಯವಿಟ್ಟು ಎಲ್ಲರೂ ಮನೆಯಲ್ಲಿಯೇ ಇರಿ ಎಂದು ವಿನಂತಿಸಿಕೊಂಡರು.

ABOUT THE AUTHOR

...view details