ಕರ್ನಾಟಕ

karnataka

ETV Bharat / state

ವಾಹನ ಸಮೇತ ನೀರಿನಲ್ಲಿ ಮುಳುಗಿ ವೃದ್ಧ ಸಾವು - man death in water with TATA ACE in bellary

ಟಾಟಾ ಏಸ್​ ತೊಳೆಯಲು ತುಂಗಭದ್ರಾ ಬಲದಂಡೆಗೆ ತೆರಳಿದ್ದ ವೃದ್ಧನೋರ್ವ ವಾಹನ ಸಮೇತ ನೀರನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ವಾಹನ ಮತ್ತು ಸಾವನ್ನಪ್ಪಿದ ವ್ಯಕ್ತಿಯ ಹುಡುಕಾಟ ನಡೆಸುತ್ತಿರುವುದು

By

Published : Nov 9, 2019, 10:01 AM IST

ಬಳ್ಳಾರಿ:‌ ನಗರದ ಹೊರವಲಯದಲ್ಲಿರುವ ಕುವೆಂಪು ನಗರದ ಹಿಂಭಾಗದಲ್ಲಿ ಹಾದು ಹೋಗಿರುವ ತುಂಗಭದ್ರಾ ಬಲದಂಡೆ ಕಾಲುವೆಯಲ್ಲಿ ಟಾಟಾ ಏಸ್ ತೊಳೆಯಲು ಹೋದ ವ್ಯಕ್ತಿ ವಾಹನ ಸಮೇತ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ವಾಹನ ಮತ್ತು ಸಾವನ್ನಪ್ಪಿದ ವ್ಯಕ್ತಿಯ ಹುಡುಕಾಟ ನಡೆಸುತ್ತಿರುವುದು

ನಗರದ ಕೌಲ್ ಬಜಾರ್ ನಿವಾಸಿ ಅಹಮ್ಮದ್ ( 68 ವರ್ಷ) ಸಾವನ್ನಪ್ಪಿರುವ ವ್ಯಕ್ತಿ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದು, ಕಾರ್ಯಾಚರಣೆ ನಡೆಸಿ ಟಾಟಾ ಏಸ್ ಮತ್ತು ವ್ಯಕ್ತಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ.

For All Latest Updates

ABOUT THE AUTHOR

...view details