ಕರ್ನಾಟಕ

karnataka

By

Published : Mar 11, 2020, 11:34 AM IST

Updated : Mar 11, 2020, 12:17 PM IST

ETV Bharat / state

ತಡರಾತ್ರಿ ಸಿಲಿಂಡರ್​ ಸ್ಫೋಟ: ಇಬ್ಬರಿಗೆ ಗಂಭೀರ ಗಾಯ

ಬಳ್ಳಾರಿ ತಾಲೂಕಿನ‌‌ ಕಪ್ಪಗಲ್ಲು ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ತಡರಾತ್ರಿ 3 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

injured persons
ಗಾಯಗೊಂಡವರು

ಬಳ್ಳಾರಿ: ತಾಲೂಕಿನ‌‌ ಕಪ್ಪಗಲ್ಲು ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ತಡರಾತ್ರಿ 3 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿಲಿಂಡರ್​ ಸ್ಫೋಟಗೊಂಡಿರುವುದು

ಕಪ್ಪಗಲ್ಲು ಗ್ರಾಮದ ನಿವಾಸಿ ಜಯಮ್ಮ(45) ಹಾಗೂ ಮಗ ಸಂದೀಪ್ (25) ಗಾಯಗೊಂಡವರೆಂದು ಗುರುತಿಸಲಾಗಿದೆ. ಇವರಿಬ್ಬರು ಮನೆಯ ಎರಡನೇ ಮಹಡಿಯಲ್ಲಿ‌ ಮಲಗಿಕೊಂಡಿದ್ದರು. ಕೆಳ ಮಹಡಿಯ ಕಿಚನ್​ನಲ್ಲಿದ್ದ ಸಿಲಿಂಡರ್​ನಲ್ಲಿರುವ ಅನಿಲ ಸೋರಿಕೆಯಾಗಿ ಮೇಲಿನ ಮಹಡಿಗೆ ಹೋಗಿದೆ. ಎಚ್ಚರಗೊಂಡ‌ ಜಯಮ್ಮ ಗಾಬರಿಯಾಗಿ ಕೊಠಡಿಯೊಳಗಿದ್ದ ಬಲ್ಬ್​ ಹಾಕಲು ಸ್ವಿಚ್​ ಆನ್​ ಮಾಡಿದಾಗ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದಾಳೆ. ಮಗ ಸಂದೀಪ್​ನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಬ್ಬರನ್ನು ಹೆಚ್ಚುವರಿ ಚಿಕಿತ್ಸೆಗೆಂದು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Mar 11, 2020, 12:17 PM IST

ABOUT THE AUTHOR

...view details