ಕರ್ನಾಟಕ

karnataka

By

Published : Aug 21, 2020, 2:19 PM IST

ETV Bharat / state

ಬಳ್ಳಾರಿ: ಪತ್ನಿ ಅಗಲಿಕೆಯಿಂದ ಮನ ನೊಂದು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಪತಿ!

ಘಟನೆಯಲ್ಲಿ ತಂದೆ ಹಾಗೂ ಕಿರಿಯ ಮಗಳು ಸಾವನ್ನಪ್ಪಿದರೆ, ಅದೃಷ್ಟವಶಾತ್​​​ ಹಿರಿಯ ಮಗಳು ಬದುಕುಳಿದಿದ್ದಾಳೆ. ಪುತ್ರಿ ಸ್ಫೂರ್ತಿ ಮೃತದೇಹ ಪತ್ತೆಯಾಗಿದ್ದು, ತಂದೆ ಗಣೇಶ್​ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

Husband flees into canal with two children
ಪತ್ನಿ ಅಗಲಿಕೆಯಿಂದ ಮನನೊಂದು ತನ್ನಿಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಪತಿ

ಬಳ್ಳಾರಿ: ಅನಾರೋಗ್ಯಕ್ಕೆ ತುತ್ತಾಗಿ ಪತ್ನಿ ಸಾವನ್ನಪ್ಪಿದ್ದಕ್ಕೆ ಮನ ನೊಂದು ಪತಿ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲವೆಗೆ ಹಾರಿದ ಹೃದಯವಿದ್ರಾವಕ ಘಟನೆ ನಡೆದಿದೆ.

ಘಟನೆಯಲ್ಲಿ ತಂದೆ ಹಾಗೂ ಕಿರಿಯ ಮಗಳು ಸಾವನ್ನಪ್ಪಿದರೆ, ಪವಾಡವೆಂಬಂತೆ ಹಿರಿಯ ಮಗಳು ಬದುಕುಳಿದಿದ್ದಾಳೆ. ಇಲ್ಲಿನ ಹಲಕುಂದಿ ಗ್ರಾಮದ ಬಳಿಯ ಮುಂಡರಗಿ ಡ್ರಾಪ್​ನ ಹೆಚ್​​​ಎಲ್​ಸಿ ಬಳಿ ಘಟನೆ ನಡೆದಿದೆ. ಬೆಂಗಳೂರು ರಸ್ತೆಯಲ್ಲಿರುವ ಖಬರ್​​ಸ್ತಾನ್ ಎದುರಿನ ಪೆಟ್ರೋಲ್ ಬಂಕ್​​​ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಣೇಶ್ ಆಚಾರಿ ತನ್ನಿಬ್ಬರು ಮಕ್ಕಳೊಂದಿಗೆ ಇಲ್ಲಿನ ಹೆಚ್​​​​​ಎಲ್​​ಸಿ ಉಪ ಕಾಲುವೆಗೆ ಹಾರಿದ್ದಾರೆ.

ಘಟನೆಯಲ್ಲಿ ಬದುಕುಳಿದ ಹಿರಿಯ ಪುತ್ರಿ

ಘಟನೆಯಲ್ಲಿ 12 ವರ್ಷದ ಪುತ್ರಿ ಸ್ಫೂರ್ತಿ ಹಾಗೂ ತಂದೆ ಗಣೇಶ್​ ಜಲಸಮಾಧಿಯಾದರೆ, ಇನ್ನೊಬ್ಬ ಮಗಳನ್ನು ಗೃಹರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನು ಪುತ್ರಿ ಸ್ಫೂರ್ತಿ ಮೃತದೇಹ ಪತ್ತೆಯಾಗಿದ್ದು, ಗಣೇಶ್​ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಘಟನೆ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details