ಕರ್ನಾಟಕ

karnataka

ETV Bharat / state

ಸಾಲಬಾಧೆಯಿಂದ ರೈತ ಆತ್ಮಹತ್ಯೆ: ಪರಿಹಾರ ವಿತರಿಸಿದ ಡಿಸಿಎಂ ಸವದಿ - ಡಿಸಿಎಂ ಸವದಿಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಚೆಕ್​​ ವಿತರಣೆ

ಬೆಳೆಹಾನಿ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದ ಗುಂಡ್ಲವದ್ದಿಗೇರಿಯ ತಿಮ್ಮಾರೆಡ್ಡಿ ಕುಟುಂಬಕ್ಕೆ ಡಿಸಿಎಂ ಸವದಿ 5 ಲಕ್ಷ ರೂ.ಗಳ ಪರಿಹಾರದ ಚೆಕ್​​​​ನ್ನ ವಿತರಿಸಿದ್ದಾರೆ.

A-farmer-who-commits-suicide-by-debt-relief-distributed-by-laxman-savadi
ಸಾಲಬಾಧೆಯಿಂದ ರೈತ ಆತ್ಮಹತ್ಯೆ: ಪರಿಹಾರ ವಿತರಿಸಿದ ಸವದಿ...

By

Published : Jan 5, 2020, 4:16 PM IST

ಬಳ್ಳಾರಿ:ಬೆಳೆಹಾನಿ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಗುಂಡ್ಲವದ್ದಿಗೇರಿಯ ತಿಮ್ಮಾರೆಡ್ಡಿ ಕುಟುಂಬಕ್ಕೆಜಿಲ್ಲಾ ಉಸ್ತುವಾರಿ ‌ಸಚಿವರಾಗಿರುವಉಪಮುಖ್ಯಮಂತ್ರಿ ಲಕ್ಷ್ಮಣ್​ ಸವದಿ 5 ಲಕ್ಷ ರೂ.ಗಳ ಪರಿಹಾರದ ಚೆಕ್​​​ನ್ನು ವಿತರಿಸಿದ್ದಾರೆ.

ರೈತ ಶಿವಶಂಕರಪ್ಪರ ಮಗ ಜೆ.ತಿಮ್ಮಾರೆಡ್ಡಿ ಅವರು ಬೆಳೆಹಾನಿ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆ ಅವರ ಧರ್ಮಪತ್ನಿ ಸುಧಾ ಹಾಗೂ ಕುಟುಂಬದವರಿಗೆ 5 ಲಕ್ಷ ರೂ.ಗಳ‌ ಪರಿಹಾರದ ಚೆಕ್ ನ್ನು ಇಂದು ಡಿಸಿಎಂ ವಿತರಿಸಿದರು. ಇದೇ ವೇಳೆ ರೈತ ತಿಮ್ಮಾರೆಡ್ಡಿ ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವರು ಸರ್ಕಾರ ತಮ್ಮೊಂದಿಗೆ ಇದೆ ಎಂದು ಅಭಯ ನೀಡಿದರು.

ಈ ಸಂದರ್ಭದಲ್ಲಿ ಹೊಸಪೇಟೆ ಶಾಸಕ ಆನಂದಸಿಂಗ್, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸೇರಿದಂತೆ ಕೃಷಿ‌‌ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details