ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆ.ಸೂಗೂರು ಗ್ರಾಮ ಸಮೀಪದ ಬೆಂಚಿ ಕ್ಯಾಂಪಿನ ಮೀನು ಸಾಕಾಣಿಕೆ ಕೆರೆಯಲ್ಲಿ ಮೂವರು ಯುವಕರು ಮುಳುಗಿ ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ.
ಸಿರುಗುಪ್ಪ ತಾಲೂಕಿನ ಟಿ.ರಾಂಪುರ ಗ್ರಾಮದ ಆರ್.ಜೆ ರಾಜಗೌಡ (40), ಕೆ.ಸೂಗೂರು ಗ್ರಾಮದ ಯೋಗೇಶ್ಗೌಡ (32), ಸಿರುಗುಪ್ಪ ನಗರದ ನಿವಾಸಿ ಸುರೇಶ (30) ಮೃತರು.
ಇಂದು ಮಧ್ಯಾಹ್ನದ ವೇಳೆ ಐವರು ಯುವಕರ ತಂಡ ಈ ಕೆರೆಯ ಬಳಿ ಊಟಕ್ಕೆಂದು ತೆರಳಿದ್ದು, ನಂತರ ಸಂಜೆ ನಾಲ್ಕರ ಸಮಯದಲ್ಲಿ ಕೆರೆಯಲ್ಲಿ ಮೀನಿಗೆ ಆಹಾರ ಹಾಕುವ ಹರಗೋಲು ಬುಟ್ಟಿಯಲ್ಲಿ ನಾಲ್ವರು ತೆರಳಿದ್ದಾರೆ. ಆಗ ಇದ್ದಕ್ಕಿದ್ದಂತೆ ಬುಟ್ಟಿ ಮಗುಚಿ ಬಿದ್ದಿದ್ದರಿಂದ ಅದರಲ್ಲಿದ್ದ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.