ಕರ್ನಾಟಕ

karnataka

ಉಡುಸಲಮ್ಮ ಕೆರೆಯಲ್ಲಿ ಈಜಲು ಹೋದ ಬಾಲಕ ಸಾವು

By

Published : Nov 4, 2020, 1:00 PM IST

ಬಳ್ಳಾರಿ ಜಿಲ್ಲೆಯ ಉಡುಸಲಮ್ಮ ಕೆರೆಯಲ್ಲಿ ಈಜಾಡಲು ಎಂದು ತೆರಳಿದ್ದ ವೇಳೆ, ಈಜು ಬಾರದೇ 14 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

14 years old boy dies in a udasalamma  lake
ಬಾಲಕ ಸಾವು

ಬಳ್ಳಾರಿ:ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಗಿಮಾವಿನಹಳ್ಳಿ ಗ್ರಾಮದ ಉಡುಸಲಮ್ಮ ಕೆರೆಯಲ್ಲಿ ಈಜಾಡಲು ಹೋಗಿದ್ದ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಮಗಿಮಾವಿನಹಳ್ಳಿ ಗ್ರಾಮದ ಬಾಲಕ ವಿಠ್ಠಲ (14) ಮೃತ ಬಾಲಕ ಎಂದು ಗುರುತಿಸಲಾಗಿದೆ. ಗ್ರಾಮದ ನಾಲ್ಕು ಮಂದಿ ಸ್ನೇಹಿತರೊಡನೆ ಉಡುಸಲಮ್ಮ ಕೆರೆಯಲ್ಲಿ ಸ್ನಾನಕ್ಕೆಂದು ಹೋದಾಗ, ಈಜು ಬಾರದೇ ಈ ದುರ್ಘಟನೆ ನಡೆದಿದೆ. ನೀರಿನಿಂದ ಬಾಲಕ ವಿಠ್ಠಲನನ್ನು ಹೊರಗೆ ತೆಗೆದು ಆಸ್ಪತ್ರೆಗಾಗಿ ಹೊಸಪೇಟೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆಂದು ಕುಟುಂಬದ ಮೂಲಗಳು ತಿಳಿಸಿವೆ.

ಕಳೆದೊಂದು ವರ್ಷದ ಹಿಂದಷ್ಟೇ ಈ ಬಾಲಕನ ತಂದೆ ಹನುಮಂತಪ್ಪ ಮೃತಪಟ್ಟಿದ್ದರು. ಇದೀಗ ತಾಯಿ ಮಂಜಮ್ಮಗೆ ಒಬ್ಬನೇ ಮಗನಾಗಿದ್ದ‌ ವಿಠ್ಠಲ್​ನ ಆಗಲಿಕೆಯಿಂದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ABOUT THE AUTHOR

...view details