ಕರ್ನಾಟಕ

karnataka

ETV Bharat / state

ಕುಡಿತಿನಿ ಬಳಿ ವಾಹನಗಳ ಡಿಕ್ಕಿ: 12‌‌ ಮಂದಿಗೆ ಗಾಯ! - Bellary

ಕುಡಿತಿನಿ ಬಳಿ ಅಪಘಾತವೊಂದು ಸಂಭವಿಸಿದೆ. ವಾಹನಗಳ ಡಿಕ್ಕಿ ರಭಸಕ್ಕೆ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಾಹನದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು‌ ಹೊರತೆಗೆಯುತ್ತಿರುವ ಸಾರ್ವಜನಿಕರು

By

Published : Jul 3, 2019, 1:29 PM IST

ಬಳ್ಳಾರಿ: ಹಿಂಬದಿಯಿಂದ ಬಂದ ಲಾರಿಯೊಂದು ಚಲಿಸುತ್ತಿದ್ದ ಕ್ರೂಷರ್​ಗೆ ತಾಕಿದ ಪರಿಣಾಮ ಮುಂದೆ ಬಲಬದಿಯಲ್ಲಿ ನಿಂತಿದ್ದ ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡೆದು ಪರಿಣಾಮ ಕ್ರೂಷರ್​ನಲ್ಲಿದ್ದ 12 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಜಿಲ್ಲೆಯ ಕುಡಿತಿನಿ ಬಳಿ ನಡೆದಿದೆ.

ವಾಹನದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು‌ ಹೊರತೆಗೆಯುತ್ತಿರುವ ಸಾರ್ವಜನಿಕರು

ಸಂಡೂರು ತಾಲೂಕಿನ‌ ಗರಗ ನಾಗಲಾಪುರ ಗ್ರಾಮದ ಕ್ರೂಷರ್​​ ಮಾಲೀಕ ಹಾಗೂ ಚಾಲಕ ಮಂಜುನಾಥ ಎಂಬುವವರಿಗೆ ಮಾತ್ರ ಗಂಭೀರ ಗಾಯಗಳಾಗಿದ್ದು, ಇನ್ನುಳಿದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಡಿತಿನಿ ಬಳಿ ಸಂಭವಿಸಿದ ಅಪಘಾತದ ದೃಶ್ಯ

ಸಂಡೂರಿನಿಂದ ಬಳ್ಳಾರಿಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವೇಳೆ, ಈ ಕ್ರೂಷರ್ ವಾಹನವು ಕುಡಿತಿನಿ ಗ್ರಾಮ ಹೊರವಲಯದ ಅಕ್ವಾಫನ್ - ಕಂಟ್ರಿಕ್ಲಬ್ ಬಳಿ ಸಂಚರಿಸುತ್ತಿರುವಾಗ ಈ ಅಪಘಾತ ಸಂಭವಿಸಿದ್ದು, ಅಪಘಾತದ ಹೊಡೆತಕ್ಕೆ ಕ್ರೂಷರ್​ ನಜ್ಜುಗುಜ್ಜಾಗಿದೆ. ಈ ವಾಹನದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು‌ ಹೊರ ತೆಗೆಯಲು ಸಾರ್ವಜನಿಕರು ಹರಸಾಹಸ‌ಪಟ್ಟರು.

ABOUT THE AUTHOR

...view details