ಕರ್ನಾಟಕ

karnataka

ETV Bharat / state

ನಾಯಿ ಮರಿ ಜೀವ ಉಳಿಸಲು ಹೋಗಿ ಯುವಕ ಸಾವು - man went to save dog and died

ನಾಯಿ ಮರಿ ಜೀವ ಉಳಿಸಲು ಹೋದ‌ ಬೈಕ್ ಸವಾರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

Young man who went to save dog died
ನಾಯಿ ಮರಿ ಜೀವ ಉಳಿಸಲು ಹೋಗಿ ಯುವಕ ಸ್ಥಳದಲ್ಲಿ ಸಾವು

By

Published : Dec 22, 2019, 6:01 PM IST

ಚಿಕ್ಕೋಡಿ:ನಾಯಿ ಮರಿ ಜೀವ ಉಳಿಸಲು ಹೋದ‌ ಬೈಕ್ ಸವಾರ ಅಪಘಾತದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

ಸೌರಭ ಕಾಶಾಳಕರ (24) ಸ್ಥಳದಲ್ಲಿ ಸಾವನ್ನಪ್ಪಿದ ಯುವಕ.

ನಾಯಿ ಮರಿ ಜೀವ ಉಳಿಸಲು ಹೋಗಿ ಯುವಕ ಸ್ಥಳದಲ್ಲಿ ಸಾವು

ಈತ ಮಹಾರಾಷ್ಟ್ರದ ಅಜರಾ ತಾಲೂಕಿನ ಕಾನೊಳಿ ಗ್ರಾಮದಿಂದ ನಿಪ್ಪಾಣಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ತನ್ನ ಊರು ಕೊಲ್ಲಾಪುರಕ್ಕೆ ತೆರಳುತ್ತಿದ್ದ. ಈ ವೇಳೆ ರಸ್ತೆಯ ಮಧ್ಯದಲ್ಲಿ ನಾಯಿ ಮರಿಯೊಂದು ಓಡಿ ಬರುತ್ತಿದ್ದನ್ನು ಕಂಡಿದ್ದಾನೆ. ಆಗ ಅದರ ಜೀವ ಉಳಿಸಲು ಹೋಗಿ ಬೈಕ್​ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರವಾಗಿ ಗಾಯವಾಗಿದೆ. ಇದೇ ವೇಳೆ ಹಿಂದಿನಿಂದ ಮತ್ತೊಂದು ಅಪರಿಚಿತ ವಾಹನ ಆತನ ಮೈಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ನಿಪ್ಪಾಣಿ ಪಟ್ಟಣದ ಬಸವೇಶ್ವರ ಚೌಕ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details