ಕರ್ನಾಟಕ

karnataka

ETV Bharat / state

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ-ರಮೇಶ್​​ ಜಾರಕಿಹೊಳಿ ಮುಖಾಮುಖಿ! - Yeddyurappa

ವಿಮಾನ ‌ನಿಲ್ದಾಣದಲ್ಲಿ ಯಡಿಯೂರಪ್ಪ ಹಾಗೂ ರಮೇಶ್​ ‌ಜಾರಕಿಹೊಳಿ ಮುಖಾಮುಖಿಯಾಗಿ ಉಭಯ ಕುಶಲೋಪರಿ ನಡೆಸಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ  ಯಡಿಯೂರಪ್ಪ- ರಮೇಶ ಜಾರಕಿಹೊಳಿ ಮುಖಾಮುಖಿ!

By

Published : Sep 10, 2019, 4:44 PM IST

ಬೆಳಗಾವಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ-ರಮೇಶ್​ ಜಾರಕಿಹೊಳಿ ಮುಖಾಮುಖಿ!

ಜಿಲ್ಲೆಯ ‌ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ಅವಲೋಕಿಸಲು ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದರು. ಮುಂಬೈಗೆ ತೆರಳಲು ರಮೇಶ್​ ಜಾರಕಿಹೊಳಿ ಗೋಕಾಕ್​ನಿಂದ ಬೆಳಗಾವಿ ವಿಮಾನ ‌ನಿಲ್ದಾಣಕ್ಕೆ ಆಗಮಿಸಿದ್ದರು. ಯಡಿಯೂರಪ್ಪ ಬರುತ್ತಿರುವ ವಿಷಯ ತಿಳಿದು ರಮೇಶ್​​ ಜಾರಕಿಹೊಳಿ ವಿಮಾನ ನಿಲ್ದಾಣದ ವೇಟಿಂಗ್ ರೂಂನಲ್ಲಿ ಕಾಂಗ್ರೆಸ್ ಮುಖಂಡ ಶಿವಕಾಂತ ಸಿದ್ನಾಳ‌ ಜತೆಗೆ ಚರ್ಚೆ ನಡೆಸಿದರು. ಈ ವೇಳೆ ಮಾಧ್ಯಮಗಳ ಕ್ಯಾಮರಾ ಕಂಡ ತಕ್ಷಣ ಕೈ ಮುಗಿದು ರಮೇಶ್​ ಹೊರ ನಡೆದರು.

ಸಿಎಂ ‌ಸ್ವಾಗತಕ್ಕೆ‌ ಆಗಮಿಸಿದ್ದ ಬಿಜೆಪಿ ‌ಮುಖಂಡರೊಂದಿಗೆ ರಮೇಶ್​​ ಜಾರಕಿಹೊಳಿ ಮಾತುಕತೆ ನಡೆಸಿದರು. ವಿಮಾನ ‌ನಿಲ್ದಾಣದಲ್ಲಿ ಯಡಿಯೂರಪ್ಪ ಹಾಗೂ ರಮೇಶ್​ ‌ಜಾರಕಿಹೊಳಿ ಮುಖಾಮುಖಿಯಾಗಿ ಉಭಯ ಕುಶಲೋಪರಿ ನಡೆಸಿದರು. ಬಳಿಕ ರಮೇಶ್​ ಮುಂಬೈಗೆ ಹಾರಿದರು.‌ ಸಿ‌ಎಂ‌ ರಾಮದುರ್ಗ ‌ಪ್ರವಾಸ ಕೈಗೊಂಡರು.

ABOUT THE AUTHOR

...view details