ಬೆಳಗಾವಿ:ನಾವೆಲ್ಲರೂ ಸೇರಿ ಈ ಬಾರಿ ಮಹೇಶ್ ಕುಮಟಳ್ಳಿ ಅವರನ್ನು 25,000 ಸಾವಿರ ಮತಗಳಿಂದ ಉಪ ಚುನಾವಣೆಯಲ್ಲಿ ಗೆಲ್ಲಿಸಬೇಕು. ಬೃಹತ್ ಗೆಲುವು ಪಡೆದ ನಂತರ ಅವರು ದೊಡ್ಡ ಹುದ್ದೆಗೆ ಹೋಗ್ತಾರೆ ಎಂದು ದರೂರ ಗ್ರಾಮದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಹೇಳಿದರು.
ಮಹೇಶ್ ಕುಮಟಳ್ಳಿಗೆ ಯಾವುದೇ ರೀತಿಯ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಮೊನ್ನೆ ಅವರ ವಿಷಯದಲ್ಲಿ ಗಲಾಟೆ ನಡೆದಿತ್ತು. ಅನರ್ಹ ಶಾಸಕರು ಮಹೇಶ್ ಕುಮಟಳ್ಳಿ ಅವರನ್ನು ತುಂಬಾ ಕಾಳಜಿಯಿಂದ ಕಾಣುತ್ತಾರೆ ಎಂಬ ಮಾಹಿತಿ ಇದೆ ಎಂದು ರಮೇಶ್ ಜಾರಕಿಹೊಳಿ ಸಭೆಯಲ್ಲಿ ಹೇಳಿದ್ರು.