ಕರ್ನಾಟಕ

karnataka

ETV Bharat / state

ನವಿಲುತೀರ್ಥ ಜಲಾಶಯದಿಂದ ನೀರು‌ ಬಿಡುಗಡೆ: ಮುನವಳ್ಳಿ‌ ಪಟ್ಟಣಕ್ಕೆ ನುಗ್ಗಿದ‌ ನೀರು - ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣಕ್ಕೆ ನೀರು ನುಗ್ಗಿ‌ ಅವಾಂತರ ಸೃಷ್ಟಿಸಿದೆ. ಮುನವಳ್ಳಿಯ ಯಲಿಗಾರ ಓಣಿ‌‌‌ ಸೇರಿದಂತೆ ಸುತ್ತ - ಮುತ್ತಲಿನ ಮನೆಗಳಿಗೆ‌ ನೀರು‌ ನುಗ್ಗಿದೆ.

water Release  from Navil Tirtha Reservoir
ಮುನವಳ್ಳಿ‌ ಪಟ್ಟಣಕ್ಕೆ ನುಗ್ಗಿದ‌ ನೀರು..

By

Published : Aug 17, 2020, 8:26 AM IST

Updated : Aug 17, 2020, 9:09 AM IST

ಬೆಳಗಾವಿ: ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 25ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವುದರಿಂದ‌ ನದಿ ಪಾತ್ರದ ಜನರಲ್ಲಿ ಆತಂಕ ಶುರುವಾಗಿದೆ.

ಮುನವಳ್ಳಿ‌ ಪಟ್ಟಣಕ್ಕೆ ನುಗ್ಗಿದ‌ ನೀರು

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣಕ್ಕೆ ನೀರು ನುಗ್ಗಿ‌ ಅವಾಂತರ ಸೃಷ್ಟಿಸಿದೆ. ಮುನವಳ್ಳಿಯ ಯಲಿಗಾರ ಓಣಿ‌‌‌ ಸೇರಿದಂತೆ ಸುತ್ತ-ಮುತ್ತಲಿನ ಮನೆಗಳಿಗೆ‌ ನೀರು‌ ನುಗ್ಗಿದೆ. ಪಟ್ಟಣದ‌ ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ, ಅಂಗಡಿ ಮುಂಗಟ್ಟುಗಳಿಗೂ‌ ನೀರು‌ ನುಗ್ಗಿದ್ದು, ಜನರು ಮನೆ ಮೇಲೇರಿ ಜೀವ ರಕ್ಷಣೆ‌ ಮಾಡಿಕೊಂಡಿದ್ದಾರೆ‌. ಅಲ್ಲದೇ ಯರಗಟ್ಟಿ ‌ಹಾಗೂ ಸವದತ್ತಿ ‌ಸಂಪರ್ಕಿಸುವ ಸೇತುವೆ ಕೂಡ ಮುಳುಗಡೆ ‌ಆಗಿದ್ದು, ಮುನವಳ್ಳಿ ಸಂಪರ್ಕ ಸಂಪೂರ್ಣ ‌ಸ್ಥಗಿತಗೊಂಡಿದೆ.

ನೀರು‌ ಬಿಡುಗಡೆ ಹಿನ್ನೆಲೆ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ಸರ್ಕಾರಿ ಶಾಲೆಗೆ ನೀರು ನುಗ್ಗಿದೆ. ಅಲ್ಲದೇ ಗ್ರಾಮದ 20ಕ್ಕೂಅಧಿಕ ಮನೆಗಳು ಜಲಾವೃತಗೊಂಡಿವೆ.

Last Updated : Aug 17, 2020, 9:09 AM IST

ABOUT THE AUTHOR

...view details