ಕರ್ನಾಟಕ

karnataka

ETV Bharat / state

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ರಾಹುಕಾಲ ನೋಡಿ ನಾಮಪತ್ರ ಸಲ್ಲಿಸಿದ ಜಾರಕಿಹೊಳಿ ಆಪ್ತ - undefined

ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಮತ್ತೊಂದು ಅವಧಿಗೆ ಆಯ್ಕೆಯಾಗಲು ರಮೇಶ್​ ಜಾರಕಿಹೊಳಿ ಆಪ್ತ ವಿವೇಕರಾವ್ ಪಾಟೀಲ್​ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆ

By

Published : May 10, 2019, 11:56 AM IST

ಬೆಳಗಾವಿ:ಬೆಳಗಾವಿಯ ಪ್ರತಿಷ್ಠಿತ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ರಾಹುಕಾಲ ಭೀತಿಯಿಂದ ಪರಿಷತ್ ಸದಸ್ಯ ಹಾಗೂ ರಮೇಶ್​ ಜಾರಕಿಹೊಳಿ ಆಪ್ತ ವಿವೇಕರಾವ್ ಪಾಟೀಲ್​ ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸಿದರು.

ಕೆಎಂಎಫ್‌ ಅಧ್ಯಕ್ಷ ಸ್ಥಾನ ಚುನಾವಣೆಗೆ ನಾಮಪತ್ರ ಸಲ್ಲಿಸಿದ ವಿವೇಕರಾವ್ ಪಾಟೀಲ್

ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ವಿವೇಕರಾವ್ ಬಯಸಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. 10.10 ರ ನಂತರ ರಾಹುಕಾಲ ಆರಂಭವಾಗುತ್ತಿರುವುದರಿಂದ 10 ಗಂಟೆಗೆ ನಾಮಪತ್ರ ಸಲ್ಲಿಸಿದರು.

ಇದಕ್ಕೂ‌ ಮೊದಲು‌ ನಗರದ‌ ಖಾಸಗಿ ಹೋಟೆಲ್​ನಲ್ಲಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಯಿತು. ವಿವೇಕರಾವ್ ಪಾಟೀಲ್​, ಅಮರನಾಥ ಜಾರಕಿಹೊಳಿ ಸೇರಿದಂತೆ 10 ಕ್ಕೂ ಅಧಿಕ ನಿರ್ದೇಶಕರು ಸಭೆಯಲ್ಲಿ ಭಾಗಿಯಾಗಿದ್ದರು. ಜಾರಕಿಹೊಳಿ ಬಣದಿಂದ ವಿವೇಕರಾವ್ ಅವರನ್ನು ಮತ್ತೊಂದು ಅವಧಿಗೆ ಅಧ್ಯಕ್ಷರನ್ನಾಗಿ ಮಾಡಲು‌ ನಿರ್ಣಯ ತೆಗೆದುಕೊಳ್ಳಲಾಯಿತು. ಬಳಿಕ ಆ ಬಣದ ನಿರ್ದೇಶಕರು ಕೆಎಂಎಫ್​​ಗೆ ಬಂದು ಉಮೇದುವಾರಿಕೆ ಸಲ್ಲಿಸಿದರು.

For All Latest Updates

TAGGED:

ABOUT THE AUTHOR

...view details