ಕರ್ನಾಟಕ

karnataka

By

Published : Mar 22, 2020, 4:11 PM IST

ETV Bharat / state

ದೇಶಾದ್ಯಂತ 3700ಕ್ಕೂ ಹೆಚ್ಚಿನ ರೈಲುಗಳ ಸಂಚಾರ ಸ್ಥಗಿತ: ಸುರೇಶ ಅಂಗಡಿ

ಕೊರೊನಾ ವೈರಸ್ ಹರಡದಂತೆ ತಡೆಯಲು ಪ್ರಧಾನಿ ಅವರ ಆದೇಶದ ಮೇರೆಗೆ ನಿನ್ನೆ ರೈಲ್ವೆ ಸಚಿವರು, ಅಧಿಕಾರಿಗಳ ಸಭೆ ನಡೆಸಿದ್ದು, ದೇಶಾದ್ಯಂತ 3700ಕ್ಕೂ ಹೆಚ್ಚಿನ ರೈಲುಗಳನ್ನು ರದ್ದುಪಡಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.

Suresh Angadi
ರೈಲುಗಳ ಸಂಚಾರ ಸ್ಥಗಿತ: ಸುರೇಶ ಅಂಗಡಿ

ಬೆಳಗಾವಿ:ಕೊರೊನಾ ವೈರಸ್ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದ ಮೇರೆಗೆ ನಿನ್ನೆಯೇ ರೈಲ್ವೆ ಸಚಿವರು, ಅಧಿಕಾರಿಗಳ ಸಭೆ ನಡೆಸಿದ್ದರು. ದೇಶದಲ್ಲಿ 3700ಕ್ಕೂ ಹೆಚ್ಚಿನ ರೈಲುಗಳನ್ನು ರದ್ದುಪಡಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಾಹಿತಿ ನೀಡಿದ್ದಾರೆ.

ರೈಲುಗಳ ಸಂಚಾರ ಸ್ಥಗಿತದ ಕುರಿತು ಸಚಿವ ಸುರೇಶ ಅಂಗಡಿ ಮಾಹಿತಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶೇಷವಾಗಿ ಬೆಳಗಾವಿ-ಹುಬ್ಬಳ್ಳಿ ಡಿವಿಜನ್ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ರೈಲುಗಳನ್ನು ರದ್ದುಪಡಿಸಲಾಗಿದೆ. ಅಲ್ಲದೇ ಗೋವಾ, ಮಹಾರಾಷ್ಟ್ರದಿಂದ ಜನರು ನಮ್ಮ ರಾಜ್ಯಕ್ಕೆ ಬರದಂತೆ ತಡೆಗಟ್ಟಲು ರೈಲು‌ ಸಂಚಾರವನ್ನ ತಾತ್ಕಾಲಿಕವಾಗಿ ಇತರ ರಾಜ್ಯಗಳಿಗೆ ತೆರಳದಂತೆ ರದ್ದುಪಡಿಸಲಾಗಿದೆ ಎಂದರು.
ಪ್ರತಿ‌ ರೈಲ್ವೆ ಸ್ಟೇಷನ್​ನಲ್ಲಿ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್​​ ‌ಹೆಚ್ಚಿಸಲಾಗುವುದು. ಇನ್ನು ಜನಸಂದಣಿ ತಡೆಯುವ ನಿಟ್ಟಿನಲ್ಲಿ ಎಲ್ಲ ರೈಲ್ವೆ ಪ್ಲಾಟ್ ಫಾರ್ಮ್​ಗಳ ದರವನ್ನು ಐವತ್ತು ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.


ABOUT THE AUTHOR

...view details