ಬೆಳಗಾವಿ:ರೈತರ ಕುರಿತಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
BCP ರೈತರ ಕುರಿತು ನೀಡಿರುವ ಹೇಳಿಕೆ ಹಿಂಪಡೆಯಬೇಕು: ಬಿಜೆಪಿ ಸಂಸದರಿಂದಲೇ ಒತ್ತಾಯ
ಸಚಿವ ಬಿ.ಸಿ.ಪಾಟೀಲ ಅವರು ಏನೋ ಹೇಳಲು ಹೊರಟು ಇನ್ನೇನೋ ಹೇಳಿದ್ದಾರೆ. ರೈತರು ಈ ಬಗ್ಗೆ ಅಪಾರ್ಥ ಮಾಡಿಕೊಳ್ಳಬಾರದು. ಕೃಷಿ ಸಚಿವರು ನೀಡಿದ ಹೇಳಿಕೆಯನ್ನು ವಾಪಸ್ ಪಡೆಯಲು ಅವರಿಗೆ ಮನವಿ ಮಾಡುತ್ತೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಈರಣ್ಣಾ ಕಡಾಡಿ
ಈ ಕುರಿತು ಮಾತನಾಡಿದ ಅವರು, ಕೃಷಿ ಸಚಿವ ಬಿ.ಸಿ.ಪಾಟೀಲ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಕಳಕಳಿ ಇಟ್ಟುಕೊಂಡು ಸ್ವಲ್ಪ ಯಡವಟ್ಟಾಗಿ ಮಾತನಾಡಿದ್ದಾರೆ. ಈ ಕುರಿತು ಯಾರೂ ಬೇಜಾರಾಗುವುದು ಬೇಡ ಎಂದರು.
ರೈತರು ಸ್ವಾಭಿಮಾನಿಗಳು ಯಾವುದೇ ಕಾರಣಕ್ಕೂ ಹೇಡಿಗಳಲ್ಲ. ಭಾರತೀಯ ಜನತಾ ಪಕ್ಷ ರೈತಪರ ಕಳಕಳಿ ಹೊಂದಿರುವ ಪಕ್ಷ. ಪಾಟೀಲ ಅವರು ಏನೋ ಹೇಳಲು ಹೊರಟು ಇನ್ನೇನೋ ಹೇಳಿದ್ದಾರೆ. ರೈತರು ಈ ಬಗ್ಗೆ ಅಪಾರ್ಥ ಮಾಡಿಕೊಳ್ಳಬಾರದು. ಕೃಷಿ ಸಚಿವರು ನೀಡಿದ ಹೇಳಿಕೆಯನ್ನು ವಾಪಸ್ ಪಡೆಯಲು ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.