ಕರ್ನಾಟಕ

karnataka

By

Published : Sep 25, 2020, 4:31 PM IST

ETV Bharat / state

ಕೃಷ್ಣಾ ನದಿ ಒಳ ಹರಿವು 46,000 ಕ್ಯೂಸೆಕ್‌ಗಿಂತ ಹೆಚ್ಚು

ಚಿಕ್ಕೋಡಿ ಉಪವಿಭಾಗದಲ್ಲಿ ಚಿಕ್ಕೋಡಿ -2.0 ಮಿ.ಮೀ, ಅಂಕಲಿ -00 ಮಿ.ಮೀ, ನಾಗರಮುನ್ನೊಳಿ-00 ಮಿ.ಮೀ, ಸದಲಗಾ-0.8 ಮಿ.ಮೀ, ಜೋಡಟ್ಟಿ- 0.0 ಮಿ.ಮೀ ಮಳೆಯಾಗಿರುವ ವರದಿಯಾಗಿದೆ..

Krishna
Krishna

ಚಿಕ್ಕೋಡಿ: ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವಿನಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ. ಕೃಷ್ಣಾ ನದಿಯಲ್ಲಿ 46,000ಕ್ಕೂ ಅಧಿಕ ಕ್ಯೂಸೆಕ್‌ ಒಳ ಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಸುಭಾಷ್ ಸಂಪಗಾಂವಿ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌‌ನಿಂದ 38,750 ಕ್ಯೂಸೆಕ್‌, ದೂಧಗಂಗಾ ನದಿಯಿಂದ 7,392 ಕ್ಯೂಸೆಕ್ ಸೇರಿ ಒಟ್ಟು 46,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ-05 ಮಿ.ಮೀ, ನವಜಾ-08 ಮಿ.ಮೀ, ಮಹಾಬಲೇಶ್ವರ - 09 ಮಿ.ಮೀ, ವಾರಣಾ-13 ಮಿ.ಮೀ, ಕಾಳಮ್ಮವಾಡಿ-05 ಮಿ.ಮೀ, ರಾಧಾನಗರಿ - 09 ಮಿ.ಮೀ, ಪಾಟಗಾಂವ - 24 ಮಿ.ಮೀ ಮಳೆಯಾಗಿರೋ ವರದಿಯಾಗಿದೆ.

ಚಿಕ್ಕೋಡಿ ಉಪವಿಭಾಗದಲ್ಲಿ ಚಿಕ್ಕೋಡಿ -2.0 ಮಿ.ಮೀ, ಅಂಕಲಿ -00 ಮಿ.ಮೀ, ನಾಗರಮುನ್ನೊಳಿ-00 ಮಿ.ಮೀ, ಸದಲಗಾ-0.8 ಮಿ.ಮೀ, ಜೋಡಟ್ಟಿ- 0.0 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.

ಸದ್ಯ ಕೊಯ್ನಾ ಜಲಾಶಯ 100%, ವಾರಣಾ ಜಲಾಶಯ 100%, ರಾಧಾನಗರಿ ಜಲಾಶಯ 99%, ಕಣೇರ ಜಲಾಶಯ 99%, ಧೂಮ ಜಲಾಶಯ 98%, ಪಾಟಗಾಂವ 100%, ಧೂದಗಂಗಾ 100% ತುಂಬಿವೆ. ಹಿಪ್ಪರಗಿ ಬ್ಯಾರೇಜ್‌ನಿಂದ 38,000 ಹಾಗೂ ಆಲಮಟ್ಟಿ ಜಲಾಶಯದಿಂದ 47,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details