ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೆ ಆದ ಪರಿಣಾಮ ರಾಜ್ಯದಲ್ಲೂ ಆಗುತ್ತೆ : ಎಂಬಿ ಪಾಟೀಲ್ - ಅಥಣಿ ಸುದ್ದಿ

ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೆ ಆದ ಪರಿಣಾಮ ಕರ್ನಾಟಕದಲ್ಲೂ ಆಗುತ್ತೆ ಎಂದು ಎಂಬಿ ಪಾಟೀಲ್ ಭವಿಷ್ಯ ನುಡಿದಿದ್ದಾರೆ.

m-b-patil
ಎಂಬಿ ಪಾಟೀಲ್

By

Published : Nov 29, 2019, 2:41 AM IST

ಅಥಣಿ: ಇದೇ 9 ರಂದು ಬಿಜೆಪಿ ಸರ್ಕಾರ ಪತನ ಆಗುತ್ತೆ. ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೆ ಆದ ಪರಿಣಾಮ ಕರ್ನಾಟಕದಲ್ಲೂ ಆಗುತ್ತೆ ಎಂದು ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಎಂಬಿ ಪಾಟೀಲ್ ಭವಿಷ್ಯ ನುಡಿದಿದ್ದಾರೆ.

ಎಂಬಿ ಪಾಟೀಲ್

ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆ, ಕೈ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ತಾಲೂಕಿನ ಝುಂಜರವಾಡ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ದಲ್ಲಿ ಮಹೇಶ್ ಕುಮಟಳ್ಳಿಗೆ ಅಥಣಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 1000ಕೋಟಿ ಅನುದಾನ ನೀಡಿದ್ದೇವೆ. ಆದರೆ ಆ ಮನುಷ್ಯ ಹೇಳುವುದು ಸುಳ್ಳು ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ಆರೋಪ ಮಾಡಿದ್ದಾರೆ.

ನಂತರ ಮಾತನಾಡಿದ ಅವರು, ಗೋಕಾಕ್​ನಲ್ಲಿ ಇಂದಿಗೂ ಕೂಡಾ ಸರ್ವಾಧಿಕಾರ ಇದೆ. ಕುಳಿತುಕೋ ಎಂದರೆ ಕುಳಿತುಕೊಳ್ಳಬೇಕು. ನಡಿ ಎಂದರೆ ನಡಿಯಬೇಕು. ನಿಮ್ಮ ಮದುವೆ, ಶಾಲೆ ಅವರ ಆದೇಶದಂತೆ ಮಾಡಬೇಕೆಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿ ವಿರುದ್ಧ ಆರೋಪ ಮಾಡಿದ್ದಾರೆ.

ನಿಮ್ಮ ಅಥಣಿಯಲ್ಲಿ ಗೋಕಾಕ್ ಧೋರಣೆ ಆಗಬಾರದು ಎಂದರೆ ಗಜಾನನ ಮಂಗಸೂಳಿ ಗೆಲ್ಲಿಸಿ. ಇಲ್ಲವಾದರೆ ಅಥಣಿ ಗೋಕಾಕ್​ಗೆ ವರ್ಗವಾಗುತ್ತದೆ ಎಂದು ಕೈ ಅಭ್ಯರ್ಥಿ ಪರವಾಗಿ ಜನರಲ್ಲಿ ಮತಯಾಚನೆ ಮಾಡಿದರು.

ABOUT THE AUTHOR

...view details