ಬೆಳಗಾವಿ: ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರ ತವರು ಜಿಲ್ಲೆಯಲ್ಲಿ ಜನ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಬಸ್ನಲ್ಲಿ ಕಿಕ್ಕಿರಿದು ಪ್ರಯಾಣಿಸಿದ್ದಾರೆ.
ಬೆಳಗಾವಿ: ಮಾಸ್ಕ್, ಸಾಮಾಜಿಕ ಅಂತರ ನಿರ್ಲಕ್ಷಿಸಿ ಬಸ್ನಲ್ಲಿ ಪ್ರಯಾಣ - Belgaum latest news
ಕೊರೊನಾ ಆರ್ಭಟಕ್ಕೆ ಜಗತ್ತು ತತ್ತರಿಸಿದೆ. ಇನ್ನೊಂದೆಡೆ, ಇದಕ್ಕೂ ನಮಗೂ ಯಾವುದೇ ಸಂಬಂಧವೇ ಇಲ್ಲವೇನೋ? ಎಂಬಂತೆ ಬೆಳಗಾವಿಯ ಜನ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಬಸ್ನಲ್ಲಿ ಕಿಕ್ಕಿರಿದು ಸಂಚರಿಸಿದರು.

ಕಿಕ್ಕಿರಿದು ಬಸ್ ಸಂಚಾರ ಮಾಡಿದ ಬೆಳಗಾವಿ ಮಂದಿ...
ಬೈಲಹೊಂಗಲ ತಾಲೂಕಿನಿಂದ ನಗರಕ್ಕೆ ಬರುವ ಸಾರಿಗೆ ಬಸ್ನಲ್ಲಿ ಅಂದಾಜು 70ಕ್ಕಿಂತಲೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಬೆಳಗ್ಗೆ ಹಾಗೂ ಸಂಜೆಯ ವೇಳೆ ಈ ರೀತಿಯ ಸಂಚಾರ ಸಾಮಾನ್ಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಮಾಸ್ಕ್, ಸಾಮಾಜಿಕ ಅಂತರ ಮರೆತು ಬೆಳಗಾವಿ ಮಂದಿಯ ಬಸ್ ಪ್ರಯಾಣ
ಲಾಕ್ಡೌನ್ ಸಡಿಲಿಕೆಯ ನಂತರ ಸಾರಿಗೆ ಇಲಾಖೆ ಬಸ್ಗಳಲ್ಲಿ ಪ್ರಯಾಣಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಮೂವರು ಕೂರುವ ಸೀಟಿನಲ್ಲಿ ಇಬ್ಬರು, ಇಬ್ಬರು ಕೂರುವ ಸೀಟಿನಲ್ಲಿ ಒಬ್ಬರು ಕುಳಿತು ಪ್ರಯಾಣಿಸಬೇಕು ಎಂಬ ನಿಯಮವಿದೆ. ಈ ಬಸ್ ಸಂಚಾರದಲ್ಲಿ ಪ್ರಯಾಣಿಕರು ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂತು.