ಕರ್ನಾಟಕ

karnataka

By

Published : Aug 25, 2020, 7:00 PM IST

ETV Bharat / state

ವೇದಗಂಗಾ, ದೂಧಗಂಗಾ ನದಿಗಳ ಒಳ ಹರಿವು ಇಳಿಮುಖ

ಮಹಾರಾಷ್ಟ್ರ ಮತ್ತು ಚಿಕ್ಕೋಡಿಯಲ್ಲಿ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವು ಇಳಿಮುಖವಾಗಿದೆ ಎಂದು ಈಟಿವಿ ಭಾರತಗೆ ತಹಶೀಲ್ದಾರ್​ ಸುಭಾಸ್ ತಿಳಿಸಿದರು.

Slow flow of rivers in belgavi
ನದಿಗಳ ಒಳ ಹರಿವು ಇಳಿಮುಖ

ಚಿಕ್ಕೋಡಿ:ಮಹಾರಾಷ್ಟ್ರ, ಚಿಕ್ಕೋಡಿಯಲ್ಲಿ ಮಳೆ ಕಡಿಮೆಯಾಗಿದ್ದು, ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವು ಇಳಿಮುಖವಾಗಿದೆ.

ನದಿಗಳ ಒಳ ಹರಿವು ಇಳಿಮುಖ

1.20 ಲಕ್ಷ ಅಧಿಕ ಕ್ಯುಸೆಕ್‌ಕ್ಕಿಂತ ಹೆಚ್ಚು ಕೃಷ್ಣಾ ನದಿ ಒಳ ಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್​ ಸುಭಾಸ ಸಂಪಗಾಂವಿ ಈಟಿವಿ ಭಾರತಗೆ ಮಾಹಿತಿ ನೀಡಿದರು.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,02,625 ಕ್ಯುಸೆಕ್, ದೂಧಗಂಗಾ ನದಿಯಿಂದ 17,726 ಕ್ಯುಸೆಕ್ ನೀರು, ಒಟ್ಟು 1,20 ಲಕ್ಷ ಕ್ಯುಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ 48 ಮಿ.ಮೀ, ನವಜಾ 27 ಮಿ.ಮೀ, ಮಹಾಬಲೇಶ್ವರ 27 ಮಿ.ಮೀ, ವಾರಣಾ 15 ಮಿ.ಮೀ, ಕಾಳಮ್ಮವಾಡಿ 13 ಮಿ.ಮೀ, ರಾಧಾನಗರಿ 22 ಮಿ.ಮೀ, ಪಾಟಗಾಂವ 28 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.

ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಮತ್ತೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿರುವ ವರದಿಯಾಗಿದೆ. ಸದ್ಯ ಕೊಯ್ನಾ ಜಲಾಶಯ 92%, ವಾರಣಾ ಜಲಾಶಯ 94%, ರಾಧಾನಗರಿ ಜಲಾಶಯ 99%, ಕಣೇರ ಜಲಾಶಯ 92%, ಧೂಮ ಜಲಾಶಯ 96%, ಪಾಟಗಾಂವ 100%, ಧೂದಗಂಗಾ 97% ತುಂಬಿದೆ. ಹಿಪ್ಪರಗಿ ಬ್ಯಾರೆಜ್‌ನಿಂದ 1,32,000 ಹಾಗೂ ಆಲಮಟ್ಟಿ ಜಲಾಶಯದಿಂದ 1,00,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.

ABOUT THE AUTHOR

...view details