ಕರ್ನಾಟಕ

karnataka

ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ: ಬಿ.ಎಸ್.ಯಡಿಯೂರಪ್ಪ ವ್ಯಂಗ್ಯ

ಯಾರೇ ಬೊಬ್ಬೆ ಹೊಡೆದರೂ ರಮೇಶ್ ಜಾರಕಿಹೊಳಿ‌ ಗೆಲುವು ನಿಶ್ಚಿತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

By

Published : Dec 1, 2019, 5:35 PM IST

Published : Dec 1, 2019, 5:35 PM IST

siddaramaiah dream never come true,ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ
ಬಿ.ಎಸ್​.ಯಡಿಯೂರಪ್ಪ

ಬೆಳಗಾವಿ:ಉಪಚುನಾವಣೆ ಬಳಿಕ ನಾನೇ ಸಿಎಂ ಆಗ್ತಿನಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.

ಬಿ.ಎಸ್​.ಯಡಿಯೂರಪ್ಪ, ಸಿಎಂ

ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶ ಬಳಿಕ ನಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಸಿದ್ದರಾಮಯ್ಯ ಕಾಣುತ್ತಿರುವ ಕನಸು ತಿರುಕನದು ಎಂದು ವ್ಯಂಗ್ಯವಾಡಿದರು.

ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಪ್ರತಿಪಕ್ಷದವರು ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯಧ್ರುವೀಕರಣ ಆಗುವುದು ನಿಜ. ಹೀನಾಯ ಸೋಲಿನಿಂದ ಕಾಂಗ್ರೆಸ್ ನೆಲಕಚ್ಚಿ, ಪ್ರತಿಪಕ್ಷ ಸ್ಥಾನದಲ್ಲಿ ಕೂರಲಿದೆ. ಬಿಜೆಪಿಯವರಾದ ನಾವು ಆಡಳಿತ ಪಕ್ಷದಲ್ಲಿ ಕೂರುತ್ತೇವೆ. ಇದೇ ರಾಜಕೀಯ ‌ಧ್ರುವೀಕರಣ ಎಂದು ಸಿಎಂ ವ್ಯಾಖ್ಯಾನಿಸಿದರು.

ಯಾರೇ ಬೊಬ್ಬೆ ಹೊಡೆದರೂ ರಮೇಶ್ ಜಾರಕಿಹೊಳಿ‌ ಗೆಲುವು ನಿಶ್ಚಿತ. ನಮಗಾಗಿ ರಮೇಶ್ ಜಾರಕಿಹೊಳಿ‌ ತ್ಯಾಗ ಮಾಡಿದ್ದಾರೆ. ಸಚಿವರಾಗುವುದಿದ್ದರೆ ಮೈತ್ರಿ ಸರ್ಕಾರದಲ್ಲೇ ಉಳಿಯುತ್ತಿದ್ದರು. ಆದರೆ, ನಾನು ಸಿಎಂ ಆಗಬೇಕು ಎಂದು ರಮೇಶ್ ಶಾಸಕ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ರಮೇಶ್ ಗೆಲುವು ದಾಖಲಿಸಿ, ನಮ್ಮ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹನಿಟ್ರ್ಯಾಪ್ ಕುರಿತಾದ ಪ್ರಶ್ನೆಗೆ ಸಿಎಂ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.

ABOUT THE AUTHOR

...view details