ಕರ್ನಾಟಕ

karnataka

ETV Bharat / state

ಸವಾಲ್​ ಹಾಕಿ ಬಂದು, ಸದ್ದಿಲ್ಲದೇ ಮುಂಬೈಗೆ ಮರಳಿದ ಶಿವಸೇನೆ ಮುಖಂಡ ರಾವತ್..! - ಮುಂಬೈಗೆ ಮರಳಿದ ಶಿವಸೇನೆ ಮುಖಂಡ ರಾವತ್ ಸುದ್ದಿ

ಕರ್ನಾಟಕ ಸರ್ಕಾರಕ್ಕೆ ಸವಾಲ್​ ಹಾಕಿ ನಗರಕ್ಕೆ ಬಂದಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್ ಪೊಲೀಸರ ಖಡಕ್ ಎಚ್ಚರಿಕೆ ಹಿನ್ನೆಲೆ ಇಂದು ಮುಂಬೈಗೆ ಮರಳಿದರು.

Sanjay Rawat return to Mumbai
ಮುಂಬೈಗೆ ಮರಳಿದ ಶಿವಸೇನೆ ಮುಖಂಡ ರಾವತ್

By

Published : Jan 19, 2020, 12:32 PM IST

ಬೆಳಗಾವಿ: ಕರ್ನಾಟಕ ಸರ್ಕಾರಕ್ಕೆ ಸವಾಲ್​ ಹಾಕಿ ನಗರಕ್ಕೆ ಬಂದಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್ ಪೊಲೀಸರ ಖಡಕ್ ಎಚ್ಚರಿಕೆ ಹಿನ್ನೆಲೆ ಇಂದು ಮುಂಬೈಗೆ ಮರಳಿದರು.

ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ರಾವತ್ ಮುಂಬೈಗೆ ಪ್ರಯಾಣ ಬೆಳೆಸಿದರು. ನಿನ್ನೆ ರಾತ್ರಿ ಬೆಳಗಾವಿಯ ಮೇರಿಯಟ್ ಹೋಟೆಲ್​ನಲ್ಲಿ ತಂಗಿದ್ದ ಶಿವಸೇನೆ ಮುಖಂಡ ರಾವತ್ ಇಂದು ಬೆಳಗ್ಗೆ ಪೊಲೀಸ್ ಭದ್ರತೆಯೊಂದಿಗೆ ಹೋಟೆಲ್​ನಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಮುಂಬೈಗೆ ಮರಳಿದ ಶಿವಸೇನೆ ಮುಖಂಡ ರಾವತ್

ಬೆಳಗಾವಿಗೆ ಬಂದ ಶಿವಸೇನಾ ಮುಖಂಡ ಸಂಜಯ್ ರಾವತ್... ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲು

ಷರತ್ತು ಬದ್ಧ ಅನುಮತಿ :

ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಶಿವಸೇನೆ ಮುಖಂಡನಿಗೆ ನಗರ ಪೊಲೀಸರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಷರತ್ತುಬದ್ಧ ಅನುಮತಿ ನೀಡಿದ್ದರು. ಗಡಿ ವಿವಾದ, ಪ್ರಚೋದನಾಕಾರಿ ಭಾಷಣ ಮಾಡದಂತೆ ಸಂಜಯ್​ ರಾವತ್​ಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದರು.

ABOUT THE AUTHOR

...view details