ಬೆಳಗಾವಿ: ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧರ್ಮಸಭೆಗೆ ಗ್ರಾಮದಿಂದ 10 ಜನ ತೆರಳಿದ್ದ ಪರಿಣಾಮ ಬೆಳಗಾವಿಯ ಆ ಒಂದು ಪುಟ್ಟ ಗ್ರಾಮ ಸಂಪೂರ್ಣ ಬಂದ್ ಆಗಿದೆ.
ಕೊರೊನಾ ಶಂಕಿತನ ಜತೆಗೆ 10 ಜನರ ಪ್ರಯಾಣ: ಬೆಳಗಾವಿಯಲ್ಲಿ ಊರಿಗೂರೇ ಖಾಲಿ - ಶಿಂಧಿಕುರಬೇಟ ಗ್ರಾಮಸ್ಥರು ಸಾಮೂಹಿಕ ಲಾಕ್ಡೌನ್
ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧರ್ಮಸಭೆಗೆ ಬೆಳಗಾವಿಯ ಶಿಂಧಿಕುರಬೇಟ ಗ್ರಾಮದ 10 ಮಂದಿ ಭಾಗವಹಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ಗ್ರಾಮವನ್ನೇ ಲಾಕ್ಡೌನ್ ಮಾಡಲಾಗಿದೆ.
![ಕೊರೊನಾ ಶಂಕಿತನ ಜತೆಗೆ 10 ಜನರ ಪ್ರಯಾಣ: ಬೆಳಗಾವಿಯಲ್ಲಿ ಊರಿಗೂರೇ ಖಾಲಿ shindikurabeta-village-lockdown-due-to-corona](https://etvbharatimages.akamaized.net/etvbharat/prod-images/768-512-6619409-thumbnail-3x2-surya.jpg)
ಶಿಂಧಿಕುರಬೇಟ ಗ್ರಾಮ ಲಾಕ್ಡೌನ್
ಶಿಂಧಿಕುರಬೇಟ ಗ್ರಾಮ ಲಾಕ್ಡೌನ್
ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ದೆಹಲಿಯ ಜಮಾತ್ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಬಂದ ವ್ಯಕ್ತಿ ಜತೆಗೆ ಶಿಂಧಿಕುರಬೇಟ ಗ್ರಾಮದ 10 ಜನರು ಪ್ರಯಾಣಿಸಿದ ಮಾಹಿತಿ ಸಿಕ್ಕಿದೆ. ಶಿಂಧಿಕುರಬೇಟ ಗ್ರಾಮದ 10 ಜನರನ್ನು ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿದೆ. ಗ್ರಾಮದ ಯುವಕರು ನಿನ್ನೆ ಮಧ್ಯರಾತ್ರಿ 1 ಗಂಟೆಯವರೆಗೆ ಡಂಗೂರ ಸಾರಿ ಊರಿಗೆ ಊರೇ ಮೌನಕ್ಕೆ ಶರಣಾಗಿದೆ.