ಬೆಳಗಾವಿ: ಪಿಯು ಮೌಲ್ಯಮಾಪಕರಿಗೆ ಮತ್ತು ಸಿ ವರ್ಗದವರಿಗೆ ಆರೋಗ್ಯ ಸುರಕ್ಷಾ ಕ್ರಮ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ವತಿಯಿಂದ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮೂಲಕ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಮನವಿ ಮಾಡಿಕೊಂಡ ಪದಾಧಿಕಾರಿಗಳು, ಮೇ 29ರಿಂದ ನಡೆಯುವ ರಾಜ್ಯದ 43 ಕೇಂದ್ರದ ಮೌಲ್ಯಮಾಪಕರಿಗೆ ಕೊರೊನಾ ಸೋಂಕು ತಗುಲದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಈ ವೇಳೆ, ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮೂಕನವರ ಮಾತನಾಡಿ, ಪ್ರತಿ ಮೌಲ್ಯಮಾಪನ ಕೇಂದ್ರದಲ್ಲಿ ಮೌಲ್ಯ ಮಾಪನ ಮುಗಿಯುವರೆಗೂ ವೈದ್ಯರು ತಪಾಸಣೆ ನಡೆಸಬೇಕು.