ಕರ್ನಾಟಕ

karnataka

By

Published : Sep 5, 2019, 10:39 AM IST

ETV Bharat / state

ಕೃಷ್ಣಾ ನದಿಯಲ್ಲಿ ಹೆಚ್ಚಿದ ನೀರು: ಚಿಕ್ಕೋಡಿಗೆ ಎಸ್​​ಡಿ‌ಆರ್​​​ಎಫ್ ತಂಡ

ಕೃಷ್ಣಾ ನದಿ ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆ ಚಿಕ್ಕೋಡಿ ಸೇರಿದಂತೆ ನದಿ ತೀರ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ವಿಪತ್ತು ನಿರ್ವಹಣಾ ತಂಡ ಆಗಮಿಸಿದೆ.

ಚಿಕ್ಕೋಡಿಗೆ ಎಸ್​ ಡಿ‌ ಅರ್ ಎಫ್ ತಂಡ

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದಿದ್ದು, ಮಹಾಬಲೇಶ್ವರ, ವಾರಣಾ, ನವಜಾ, ಸಾಂಗಲಿ ಸೇರಿದಂತೆ ಹಲವೆಡೆ ಭಾರಿ ಪ್ರಮಾಣದ ಮಳೆ ಬೀಳುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ನೀರಿನ ಹರಿಯುವ ಮಟ್ಟ ಹೆಚ್ಚಾಗುತ್ತಿದೆ.

ಚಿಕ್ಕೋಡಿಗೆ ಎಸ್​​​ಡಿ‌ಆರ್​​​ಎಫ್ ತಂಡ

ಕೃಷ್ಣಾ ನದಿ ನೀರಿನ ಹರಿವು 5 ಅಡಿಯಷ್ಟು ಹೆಚ್ಚಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ರಾಯಭಾಗ, ಅಥಣಿ, ಕಾಗವಾಡ ತಾಲೂಕಿನ ಹಲವು ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಇದರಿಂದಾಗಿ ಚಿಕ್ಕೋಡಿ ಪಟ್ಟಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ವಿಪತ್ತು ನಿರ್ವಹಣಾ ತಂಡ ಬಂದಿಳಿದಿದೆ.

ABOUT THE AUTHOR

...view details