ಕರ್ನಾಟಕ

karnataka

ETV Bharat / state

ಬೆಂಕಿ ತಗುಲಿ 35 ಬಣವೆಗಳು ಭಸ್ಮ: 3.5 ಲಕ್ಷ ರೂ. ಪರಿಹಾರ ನೀಡಿದ ಸತೀಶ್​ ಜಾರಕಿಹೊಳಿ‌ - ಬೆಂಕಿ ತಗುಲಿ 35 ಬಣವೆಗಳು ಭಸ್ಮ

ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿ ಗ್ರಾಮಲ್ಲಿ ಬೆಂಕಿ ತಗುಲಿ 35 ಬಣವೆಗಳು ಸುಟ್ಟು ಭಸ್ಮವಾಗಿದ್ದು, ಸಂಕಷ್ಟದಲ್ಲಿದ್ದ ರೈತರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ 3,50,000 ರೂ. ಪರಿಹಾರ ನೀಡಿದರು..

ಸತೀಶ್​ ಜಾರಕಿಹೊಳಿ‌
ಸತೀಶ್​ ಜಾರಕಿಹೊಳಿ‌

By

Published : Feb 28, 2022, 12:39 PM IST

ಬೆಳಗಾವಿ: ಭೂತರಾಮನಹಟ್ಟಿ ಗ್ರಾಮದಲ್ಲಿ ಬೆಂಕಿ ತಗುಲಿ 35 ಬಣವೆಗಳು ಸುಟ್ಟು ಹಾನಿಗೊಳಗಾದ ಕುಟುಂಬಸ್ಥರಿಗೆ ಯುವ ನಾಯಕ ರಾಹುಲ್‌ ಜಾರಕಿಹೊಳಿ ತಲಾ ಹತ್ತು ಸಾವಿರ ರೂ. ಪರಿಹಾರ ನೀಡಿದರು.

ಯಮಕನಮರಡಿ ಕೇತ್ರದ ಹೊಸ ವಂಟಮುರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೂತರಾಮನಹಟ್ಟಿ ಗ್ರಾಮದಲ್ಲಿ ಫೆ.25ರಂದು 35 ಬಣವೆಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಈ ಕುರಿತು ಸ್ಥಳಕ್ಕೆ ಉಪ ತಹಶೀಲ್ದಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇನ್ನು ಹಾನಿಗೊಳಗಾದ 35 ಕುಟುಂಬಸ್ಥರಿಗೆ ತಲಾ 10 ಸಾವಿರ ರೂ.ಪರಿಹಾರ ನೀಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಘೋಷಿಸಿದ್ದರು.

ಈ ಹಿನ್ನೆಲೆಯಲ್ಲಿ ಯುವ ನಾಯಕ ರಾಹುಲ್‌ ಜಾರಕಿಹೊಳಿ ಭೂತರಾಮನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ 35 ಕುಟುಂಬಸ್ಥರಿಗೆ ಒಟ್ಟು 3,50,000 ರೂ. ಪರಿಹಾರ ನೀಡಿದರು.

ABOUT THE AUTHOR

...view details