ಬೆಳಗಾವಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಎಂಬುದು ರಾಜ್ಯದ ಶೇ.೯೯ ರಷ್ಟು ಜನರ ಅಭಿಪ್ರಾಯ. ಆದ್ರೆ, ಆ ಒಂದು ವಸ್ತುವಿನಿಂದ ಸರ್ಕಾರ ಉರಳಿದೆ. ಈ ಬಗ್ಗೆ ಶೀಘ್ರವೇ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಶಾಸಕ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಪತನದ ಕಪ್ಪು ಚುಕ್ಕೆ ಜಾರಕಿಹೊಳಿ ಕುಟುಂಬದ ಮೇಲೆ ಬಂದಿದೆ. ಆ ಕುಟುಂಬದ ಸದಸ್ಯನಾಗಿ ಜನರಿಗೆ ವಾಸ್ತವ ತಿಳಿಸಬೇಕಾದ ಜವಾಬ್ದಾರಿ ನನ್ನದು. ಜಾರಕಿಹೊಳಿ ಕುಟುಂಬ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಲ್ಲ. ಆ ಒಂದು ವಸ್ತುವಿನಿಂದ ಸರ್ಕಾರ ಉರುಳಿದೆ. ಆ ವಸ್ತು ಯಾವುದೆಂಬುವುದನ್ನು ಶೀಘ್ರ ರಿವೀಲ್ ಮಾಡುತ್ತೇನೆ ಎಂದರು.