ಕರ್ನಾಟಕ

karnataka

ETV Bharat / state

ಆ‌ ವಸ್ತುವಿನಿಂದ ಮೈತ್ರಿ ಸರ್ಕಾರ ಪತನ: ಸತೀಶ್​ ಜಾರಕಿಹೊಳಿ ಸಿಡಿಸಿದ್ರು ಬಾಂಬ್ - Bgm

ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಕೆಲಸ ಮುಂಚೆಯೇ ಆಗಿದ್ರೆ ಮೈತ್ರಿ ಸರ್ಕಾರ ಉಳಿಯುತ್ತಿತ್ತು. ಇನ್ನುಳಿದ 13 ಜನ ಅತೃಪ್ತ ಶಾಸಕರನ್ನ ಅನರ್ಹ ಮಾಡುವ ಸಾಧ್ಯತೆಯಿದೆ. ಅವರೆಲ್ಲ ಪಕ್ಷ ವಿರೋಧಿ ಚಟುವಟಿಗಳನ್ನ ಮಾಡಿದ್ದಾರೆ ಎಂದರು.

ಸತೀಶ್​ ಜಾರಕಿಹೊಳಿ

By

Published : Jul 26, 2019, 12:40 PM IST

ಬೆಳಗಾವಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಎಂಬುದು ರಾಜ್ಯದ ಶೇ.೯೯ ರಷ್ಟು ಜನರ ಅಭಿಪ್ರಾಯ. ಆದ್ರೆ, ಆ ಒಂದು ವಸ್ತುವಿನಿಂದ ಸರ್ಕಾರ ಉರಳಿದೆ. ಈ ಬಗ್ಗೆ ಶೀಘ್ರವೇ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಶಾಸಕ ಸತೀಶ್​ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಸರ್ಕಾರ ಪತನದ ಕಪ್ಪು ಚುಕ್ಕೆ ಜಾರಕಿಹೊಳಿ ಕುಟುಂಬದ ಮೇಲೆ ಬಂದಿದೆ. ಆ ಕುಟುಂಬದ ಸದಸ್ಯನಾಗಿ ಜನರಿಗೆ ವಾಸ್ತವ ತಿಳಿಸಬೇಕಾದ ಜವಾಬ್ದಾರಿ ನನ್ನದು. ಜಾರಕಿಹೊಳಿ ಕುಟುಂಬ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಲ್ಲ. ಆ ಒಂದು‌ ವಸ್ತುವಿನಿಂದ ಸರ್ಕಾರ ಉರುಳಿದೆ. ಆ ವಸ್ತು ಯಾವುದೆಂಬುವುದನ್ನು ಶೀಘ್ರ ರಿವೀಲ್​ ಮಾಡುತ್ತೇನೆ ಎಂದರು.

ಸತೀಶ್​ ಜಾರಕಿಹೊಳಿ, ಮಾಜಿ ಸಚಿವ

ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಕೆಲಸ ಮುಂಚೆಯೇ ಆಗಿದ್ರೆ ಮೈತ್ರಿ ಸರ್ಕಾರ ಉಳಿಯುತ್ತಿತ್ತು. ಇನ್ನುಳಿದ 13 ಜನ ಅತೃಪ್ತ ಶಾಸಕರನ್ನ ಅನರ್ಹ ಮಾಡುವ ಸಾಧ್ಯೆಯಿದೆ. ಅವರೆಲ್ಲ ಪಕ್ಷ ವಿರೋಧಿ ಚಟುವಟಿಕೆಗಳನ್ನ ಮಾಡಿದ್ದಾರೆ ಎಂದು ಸತೀಶ್​ ಆರೋಪಿಸಿದರು.

ಇನ್ನು ಆಪರೇಷನ್ ಕಮಲದ ಬಗ್ಗೆ ಮೊದಲೇ ನಾನು ಹಿರಿಯ ನಾಯಕರಿಗಳಿಗೆ ತಿಳಿಸಿದ್ದೆ. ಹೈ ಕಮಾಂಡ್ ನನ್ನ ಮಾತನ್ನು ಸಿರಿಯಸ್ ಆಗಿ ಪರಿಗಣಿಸಲಿಲ್ಲ. ಪರಿಗಣಿಸಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ. ಕಾಂಗ್ರೆಸ್ ರಿವರ್ಸ್​​ ಆಪರೇಷನ್ ಮಾಡಿದ್ರೆ ನಾವು ಸಕ್ಸಸ್ ಆಗುತ್ತಿದ್ದೆವು ಎಂದು ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಅಭಿಪ್ರಾಯಪಟ್ಟರು.

For All Latest Updates

TAGGED:

Bgm

ABOUT THE AUTHOR

...view details