'ಪಕ್ಷದಲ್ಲಿ ನಾಯಕರು ಬರ್ತಾರೆ ಹೋಗ್ತಾರೆ; ಪದಾಧಿಕಾರಿಗಳು ಮಾತ್ರ ಇರ್ತಾರೆ' - ಅಲ್ಪಸಂಖ್ಯಾತರ ಘಟಕದ ನೂತನ ಪದಾಧಿಕಾರಿಗಳ ನೇಮಕ ಸುದ್ದಿ
ನೂತನವಾಗಿ ನೇಮಕವಾದ ಪದಾಧಿಕಾರಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಇದ್ರ ಜತೆಗ ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಲಹೆ ನೀಡಿದ್ದಾರೆ.
!['ಪಕ್ಷದಲ್ಲಿ ನಾಯಕರು ಬರ್ತಾರೆ ಹೋಗ್ತಾರೆ; ಪದಾಧಿಕಾರಿಗಳು ಮಾತ್ರ ಇರ್ತಾರೆ' satish jarkiholi meeting in belagavi](https://etvbharatimages.akamaized.net/etvbharat/prod-images/768-512-8605300-thumbnail-3x2-rnj.jpg)
ಸತೀಶ ಜಾರಕಿಹೊಳಿ ಹೇಳಿಕೆ
ಬೆಳಗಾವಿ: ನಗರದ ಆರ್ಟಿಓ ಸರ್ಕಲ್ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ನೂತನ ಪದಾಧಿಕಾರಿಗಳ ನೇಮಕ ಹಾಗೂ ಪ್ರಮಾಣ ಪತ್ರವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿತರಿಸಿದರು.
ಸತೀಶ ಜಾರಕಿಹೊಳಿ ಹೇಳಿಕೆ
ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಗ್ರಾಮೀಣ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಸೇಠ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಪಂ. ಸದಸ್ಯ ಸಿದ್ದು ಸುಣಗಾರ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಬ್ರಾನ್ ತಪಕೀರ್ ಇದ್ದರು.