ಅಥಣಿ: ಶುದ್ಧ ಕುಡಿಯುವ ನೀರಿನ ಘಟಕವನ್ನು ದುಷ್ಕರ್ಮಿಗಳು ಹಾನಿ ಮಾಡಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿ ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಗ್ರಾಮಸ್ಥರು ಪಟ್ಟು ಹಿಡಿದಿರುವ ಘಟನೆ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಶುದ್ಧ ಕುಡಿಯುವ ನೀರಿನ ಘಟಕ ಧ್ವಂಸ ಮಾಡಿದ ದುಷ್ಕರ್ಮಿಗಳು: ಶಿರಹಟ್ಟಿ ಗ್ರಾಮಸ್ಥರಲ್ಲಿ ಆತಂಕ - athani pure drinking water unit
ಕಳೆದ ರಾತ್ರಿ ಶುದ್ಧ ಕುಡಿಯುವ ನೀರಿನ ಘಟಕವನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದು, ಶಿರಹಟ್ಟಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
![ಶುದ್ಧ ಕುಡಿಯುವ ನೀರಿನ ಘಟಕ ಧ್ವಂಸ ಮಾಡಿದ ದುಷ್ಕರ್ಮಿಗಳು: ಶಿರಹಟ್ಟಿ ಗ್ರಾಮಸ್ಥರಲ್ಲಿ ಆತಂಕ saboteurs destroyed pure drinking water unit in athani](https://etvbharatimages.akamaized.net/etvbharat/prod-images/768-512-9281384-thumbnail-3x2-blgv.jpg)
ಅಥಣಿ: ಶುದ್ಧ ಕುಡಿಯುವ ನೀರಿನ ಘಟಕ ಧ್ವಂಸ ಮಾಡಿದ ದುಷ್ಕರ್ಮಿಗಳು
ಶುದ್ಧ ಕುಡಿಯುವ ನೀರಿನ ಘಟಕ ಹಾನಿ
ಕಳೆದ ರಾತ್ರಿ ಶುದ್ಧ ಕುಡಿಯುವ ನೀರಿನ ಘಟಕವನ್ನು ದುಷ್ಕರ್ಮಿಗಳು ಹಾನಿ ಮಾಡಿರುವುದರಿಂದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದಲೂ ನಾವು ಈ ನೀರನ್ನು ನಂಬಿ ಇದೇ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದೇವೆ. ಆದ್ರೆ ನಿನ್ನೆ ರಾತ್ರಿ ಘಟಕ ಹಾನಿ ಮಾಡಿದ್ದು, ನೀರಿನಲ್ಲೂ ಏನಾದರೂ ವಿಷ ಹಾಕಿರಬಹುದು. ಹಾಗಾಗಿ ಈ ಘಟಕಕ್ಕೆ ಭದ್ರತೆ ಒದಗಿಸಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ತಪ್ಪಿತಸ್ಥರು ಮುಂದೆ ಈ ರೀತಿ ಮಾಡದಂತೆ ಸರಿಯಾದ ಶಿಕ್ಷೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.