ಕರ್ನಾಟಕ

karnataka

ನಿಪ್ಪಾಣಿಯಲ್ಲಿ ಮೂವರು ದರೋಡೆಕೋರರ ಬಂಧನ

By

Published : Apr 21, 2021, 7:29 AM IST

ದರೋಡೆ ಮಾಡಿ ಲಾರಿ ಕದ್ದೊಯ್ದ ಮೂವರು ಆರೋಪಿಗಳನ್ನು ವಿಜಯಪುರದ ತೋರವಿ ಗ್ರಾಮದಲ್ಲಿ ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ.

robbers arrested
ಮೂವರು ದರೋಡೆಕೋರರ ಬಂಧನ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನಿಂದ ದರೋಡೆ ಮಾಡಿ ಲಾರಿಯನ್ನು ಕದ್ದೊಯ್ದ ಮೂವರನ್ನು ನಿಪ್ಪಾಣಿ ಗ್ರಾಮೀಣ ಠಾಣೆಯ ಪೊಲೀಸರು ಮಂಗಳವಾರ ವಿಜಯಪುರದಲ್ಲಿ ಬಂಧಿಸಿದ್ದಾರೆ.

ವಿಜಯಪುರದ ಕುಮಟಗಿಯ ಯುವರಾಜ ಉಮಲು ರಾಠೋಡ (30), ಸುರೇಶ ಉಮಲು ರಾಠೋಡ (34) ಮತ್ತು ಮುತ್ತು ಉಮಲು ರಾಠೋಡ (32) ಬಂಧಿತರು.

ಬಂಧಿತರಿಂದ ದರೋಡೆ ಮಾಡಿದ್ದ 14 ಲಕ್ಷ ಮೌಲ್ಯದ ಲಾರಿ, 3 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ ವಾಹನ ಮತ್ತು 3 ಸಾವಿರ ಮೌಲ್ಯದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ABOUT THE AUTHOR

...view details