ಚಿಕ್ಕೋಡಿ: ಕೋವಿಡ್ ನಿರ್ವಹಣೆಗೆ ನೀಡಿದ್ದ ಹಣವನ್ನು ದುರ್ಬಳಕೆ ಮಾಡಿದ ಆರೋಪದಡಿ ಬೆಳಗಾವಿ ಜಿಲ್ಲೆ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿಯನ್ನು ಅಮಾನತಗೊಳಿಸಲಾಗಿದೆ.
ಕೋವಿಡ್ ನಿರ್ವಹಣೆಯ ಹಣ ದುರ್ಬಳಕೆ ಆರೋಪ: ರಾಯಬಾಗ ತಹಶೀಲ್ದಾರ್ ಅಮಾನತು - ರಾಯಬಾಗ ತಹಶೀಲ್ದಾರ್ ಅಮಾನತು
ಕೋವಿಡ್ ನಿರ್ವಹಣೆಯ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ರಾಯಬಾಗ ತಹಶೀಲ್ದಾರ್ನ್ನು ಅಮಾನತು ಮಾಡಲಾಗಿದೆ.
![ಕೋವಿಡ್ ನಿರ್ವಹಣೆಯ ಹಣ ದುರ್ಬಳಕೆ ಆರೋಪ: ರಾಯಬಾಗ ತಹಶೀಲ್ದಾರ್ ಅಮಾನತು Rayabaga Tahsildar suspension](https://etvbharatimages.akamaized.net/etvbharat/prod-images/768-512-9528059-thumbnail-3x2-hrs.jpg)
ಕೋವಿಡ್ -19 ನಿರ್ವಹಣೆ ಸಂದರ್ಭದಲ್ಲಿ ಲಕ್ಷಾಂತರ ಹಣ ವೆಚ್ಚ ಹಾಗೂ ಟಾಸ್ಕ್ ಪೋರ್ಸ್ ಸಮಿತಿಯ ಅನುಮೋದನೆ ಪಡೆಯದೆ ಹಣವನ್ನು ದುರ್ಬಳಕೆ ಮಾಡಿದ ಅಧಿಕಾರಿ ವಿರುದ್ದ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಚರ್ಚಿಸಲಾಗಿತ್ತು. ಈ ಕುರಿತು ಬೆಳಗಾವಿ ಜಿಲ್ಲೆ ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ ನಿಲುವಳಿ ಸೂಚನೆ ಮಂಡಿಸಿದ್ದರು.
ಹೀಗಾಗಿ, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಚಿಕ್ಕೋಡಿ ಎಸಿ ನೇತೃತ್ವದಲ್ಲಿ ಪ್ರಕರಣದ ತನಿಖೆಗೆ ಆದೇಶಿಸಿದ್ದರು. ತನಿಖಾ ವರದಿಯಲ್ಲಿ ಕರ್ತವ್ಯಲೋಪ ಸಾಭೀತಾದ ಹಿನ್ನಲೆ, ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿಯನ್ನು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.