ಚಿಕ್ಕೋಡಿ:ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಗಾಳಿ ಬೀಸುತ್ತಿದ್ದು, ಉತ್ತರ ಕರ್ನಾಟಕ ಭಾಗದ ಶಾಸಕರು ಗುಪ್ತವಾಗಿ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಮಾಧ್ಯಮದವರ ಕಣ್ಣು ತಪ್ಪಿಸಿ ರಮೇಶ್ ಕತ್ತಿ ಮನೆಯಿಂದ ಹೊರ ಹೋದ ಘಟನೆ ನಡೆದಿದೆ.
ಮಾಧ್ಯಮದವರ ಕಣ್ತಪ್ಪಿಸಿ ಮನೆಯಿಂದ ಹೊರ ಹೋದ ರಮೇಶ್ ಕತ್ತಿ! - ರಮೇಶ್ ಕತ್ತಿ ಲೇಟೆಸ್ಟ್ ನ್ಯೂಸ್
ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ರಮೇಶ್ ಕತ್ತಿ ನಿರಾಕರಿಸಿದ್ದು, ಮಾಧ್ಯಮದವರ ಕಣ್ಣು ತಪ್ಪಿಸಿ ಮನೆಯ ಹಿಂಬಾಗಿಲಿನಿಂದ ಖಾಸಗಿ ವಾಹನದಲ್ಲಿ ಹೊರಟು ಹೋದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
![ಮಾಧ್ಯಮದವರ ಕಣ್ತಪ್ಪಿಸಿ ಮನೆಯಿಂದ ಹೊರ ಹೋದ ರಮೇಶ್ ಕತ್ತಿ! Ramesh katti not reacted media in Chikodi](https://etvbharatimages.akamaized.net/etvbharat/prod-images/768-512-7390695-thumbnail-3x2-mang.jpg)
ಮಾಧ್ಯಮದವರ ಕಣ್ಣು ತಪ್ಪಿಸಿ ಮನೆಯಿಂದ ಹೊರ ಹೋದ ರಮೇಶ್ ಕತ್ತಿ
ಮಾಧ್ಯಮದವರ ಕಣ್ಣು ತಪ್ಪಿಸಿ ಮನೆಯಿಂದ ಹೊರ ಹೋದ ರಮೇಶ್ ಕತ್ತಿ
ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿದ್ದ ರಮೇಶ್ ಕತ್ತಿ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ಬೆಳೆವಣಿಗೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಮಾಧ್ಯಮದವರ ಕಣ್ಣು ತಪ್ಪಿಸಿ ಮನೆಯ ಹಿಂಬಾಗಿಲಿನಿಂದ ಖಾಸಗಿ ವಾಹನದಲ್ಲಿ ಹೊರಟು ಹೋದರು ಎನ್ನಲಾಗಿದೆ.