ಕರ್ನಾಟಕ

karnataka

By

Published : Aug 6, 2019, 6:09 PM IST

ETV Bharat / state

ಮಳೆ ಪ್ರಮಾಣ ಹೆಚ್ಚಾಗುವ ಭೀತಿ... ಊರಿಂದ ಗಂಟು ಮೂಟೆ ಕಟ್ಟಿದ ಜನ

ಚಿಕ್ಕೊಡಿ ವಿಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದ್ದು, ಜಿಲ್ಲಾಡಳಿತ ಹೈ ಅಲರ್ಟ್​​ ಘೋಷಿಸಿದೆ. ಈ ಹಿನ್ನಲೆ ಇಂದೇ ಜನ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಗ್ರಾಮಕ್ಕೆ ಗ್ರಾಮವೇ ಖಾಲಿ

ಚಿಕ್ಕೋಡಿ: ನಾಳೆಯಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇರುವುದರಿಂದ, ತಾಲೂಕಿನ ಇಂಗಳಿಯ ಜನರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.

ಸತತವಾಗಿ ಮಳೆ ಸುರಿಯುತ್ತಲೇ ಇರುವುದರಿಂದ ಇಂಗಳಿ ಗ್ರಾಮಸ್ಥರು ಗಂಟುಮೂಟೆ ಕಟ್ಟಿಕೊಂಡು ಗ್ರಾಮ ತೊರೆಯುತ್ತಿದ್ದಾರೆ. ಈಗಾಗಲೇ ಇಲ್ಲಿನ ಜನ ಮಳೆಯಿಂದ ತತ್ತರಿಸಿ ಹೋಗಿದ್ದು, ನಾಳೆಯಿಂದ ಮಳೆಯ ಪ್ರಭಾವ ಹೆಚ್ಚಾಗಲಿದೆ ಎಂದು ಜಿಲ್ಲಾಡಳಿತ ಹೈಅಲರ್ಟ್ ಘೋಷಣೆ ಮಾಡಿದ ಹಿನ್ನೆಲೆ, ಜನರು ತಮ್ಮ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳದತ್ತ ಹೊರಟಿದ್ದಾರೆ.

ಮಳೆ ಭೀರಿ ಗ್ರಾಮಕ್ಕೆ ಗ್ರಾಮವೇ ಖಾಲಿ

ಕೆಲವರು ಗಂಜಿ ಕೇಂದ್ರದತ್ತ ತೆರಳಿದರೆ ಇನ್ನೂ ಕೆಲವರು ಸಂಬಂಧಿಗಳ ಮನೆಗಳತ್ತ ಮುಖಮಾಡುತ್ತಿದ್ದಾರೆ.

ABOUT THE AUTHOR

...view details