ಕರ್ನಾಟಕ

karnataka

By

Published : Jan 1, 2020, 5:34 PM IST

ETV Bharat / state

ಮಹದಾಯಿ ಹೋರಾಟಗಾರರಿಂದ ಬೆಳಗಾವಿಯಲ್ಲಿ ಪ್ರತಿಭಟನೆ..

ಮಹದಾಯಿ ‌ನ್ಯಾಯಾಧೀಕರಣ‌ ತೀರ್ಪು ನೀಡಿ ಎರಡು ವರ್ಷ ಕಳೆಯುತ್ತಾ ಬಂದರೂ ಕೇಂದ್ರ ‌ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಈ ಬಗ್ಗೆ ತಕ್ಷಣವೇ ‌ಅಧಿಸೂಚನೆ‌ ಹೊರಡಿಸಬೇಕು ಎಂದು ಆಗ್ರಹಿಸಿ ಹೋರಾಟಗಾರರು ‌ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

Protest in Belgaum by Mahadai fighters
ಮಹದಾಯಿ ಹೋರಾಟಗಾರರಿಂದ ಬೆಳಗಾವಿಯಲ್ಲಿ ಪ್ರತಿಭಟನೆ

ಬೆಳಗಾವಿ: ಮಹದಾಯಿ ‌ನ್ಯಾಯಾಧೀಕರಣ‌ ತೀರ್ಪು ನೀಡಿ ಎರಡು ವರ್ಷ ಕಳೆಯುತ್ತಾ ಬಂದರೂ ಕೇಂದ್ರ ‌ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಈ ಬಗ್ಗೆ ತಕ್ಷಣವೇ ‌ಅಧಿಸೂಚನೆ‌ ಹೊರಡಿಸಬೇಕು ಎಂದು ಆಗ್ರಹಿಸಿ ಹೋರಾಟಗಾರರು ‌ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಹದಾಯಿ ಹೋರಾಟಗಾರರಿಂದ ಬೆಳಗಾವಿಯಲ್ಲಿ ಪ್ರತಿಭಟನೆ..

ನಗರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು, ರಾಜ್ಯ ರೈತ ಸಂಘ, ಹಸಿರು‌ ಸೇನೆ ಕಾರ್ಯಕರ್ತರು ಮಾಜಿ ಶಾಸಕ ಎನ್ ಹೆಚ್‌ ಕೋನರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ‌ನಡೆಸಿದರು. ಬೆಳಗಾವಿಯ ‌ಚೆನ್ನಮ್ಮ ವೃತ್ತದಿಂದ‌ ಡಿಸಿ ಕಚೇರಿವರೆಗೆ ಸಾಗಿದ ಮೆರವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ‌ಕೂಗಿದರು.

ಡಿಸಿ ಕಚೇರಿ ಎದುರು‌ ಧರಣಿ‌ ಕುಳಿತ ಹೋರಾಟಗಾರರು ಕೇಂದ್ರ ‌ಸರ್ಕಾರದ ವಿರುದ್ಧ ಅಸಮಾಧಾನ ‌ವ್ಯಕ್ತಪಡಿಸಿದರು.‌ ಬಳಿಕ ಬೆಳಗಾವಿ ಡಿಸಿ ಎಸ್ ಬಿ ಬೊಮ್ಮನಹಳ್ಳಿ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದರು. ತುಮಕೂರಿನಲ್ಲಿ ನಡೆಯುವ ರೈತ ಸಮಾವೇಶಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಈ ವೇಳೆ ಮಹದಾಯಿ ಅಧಿಸೂಚನೆ ಹೊರಡಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

For All Latest Updates

ABOUT THE AUTHOR

...view details