ಬೆಳಗಾವಿ: ನೇಕಾರ ಕಾರ್ಮಿಕರಿಗೆ ಸರ್ಕಾರ ಘೋಷಿಸಿರುವ 2 ಸಾವಿರ ರೂ.ಗಳ ಬದಲಾಗಿ 10 ಸಾವಿರ ಪರಿಹಾರ ಘೋಷಣೆ ಮಾಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ನೇಕಾರ ಕಾರ್ಮಿಕ ಬಳಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ವಿಶೇಷ ಪ್ಯಾಕೇಜ್ ಧನಸಹಾಯ ಹೆಚ್ಚಿಸಲು ಆಗ್ರಹಿಸಿ ನೇಕಾರ ಕಾರ್ಮಿಕ ಬಳಗದಿಂದ ಪ್ರತಿಭಟನೆ - weaver industry
ಕೊರೊನಾ ಲಾಕ್ಡೌನ್ ಹಿನ್ನೆಲೆ ಘೋಷಿಸಿದ್ದ ವಿಶೇಷ ಪ್ಯಾಕೇಜ್ನ ಧನಸಹಾಯ ಹೆಚ್ಚಿಸುವಂತೆ ನೇಕಾರ ಕಾರ್ಮಿಕರ ಬಳಗದಿಂದ ಪ್ರತಿಭಟನೆ ನಡೆಸಲಾಯಿತು. ನೇಕಾರ ಕಾರ್ಮಿಕರಿಗೆ ಈಗಾಗಲೇ ಘೋಷಿಸಿರುವ 2 ಸಾವಿರ ರೂಪಾಯಿ ಬದಲಾಗಿ 10 ಸಾವಿರ ನೀಡುವಂತೆ ಪ್ರತಿಭಟನೆ ನಡೆಸಿದರು.
![ವಿಶೇಷ ಪ್ಯಾಕೇಜ್ ಧನಸಹಾಯ ಹೆಚ್ಚಿಸಲು ಆಗ್ರಹಿಸಿ ನೇಕಾರ ಕಾರ್ಮಿಕ ಬಳಗದಿಂದ ಪ್ರತಿಭಟನೆ Protest from weavers labor union demanding special package](https://etvbharatimages.akamaized.net/etvbharat/prod-images/768-512-7724039-346-7724039-1592829366720.jpg)
ಬೆಳಗಾವಿ: ವಿಶೇಷ ಪ್ಯಾಕೇಜ್ಗೆ ಆಗ್ರಹಿಸಿ ನೇಕಾರರ ಕಾರ್ಮಿಕ ಬಳಗದಿಂದ ಪ್ರತಿಭಟನೆ
ನೇಕಾರ ಕಾರ್ಮಿಕ ಬಳಗದಿಂದ ಪ್ರತಿಭಟನೆ
ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ನೌಕರರು, ದೇಶದ ಮಾನ ಮುಚ್ಚುವ ನೇಕಾರರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕಳೆದ 4 ವರ್ಷಗಳಿಂದ ಸತತ ಬರಗಾಲ ಹಿನ್ನೆಲೆ ಮಾರುಕಟ್ಟೆ ಕುಸಿತವಾಗಿದ್ದರಿಂದ ನೇಕಾರರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ನೇಕಾರ ಕಾರ್ಮಿಕ ಬಳಗದ ಮುಖಂಡ ಸೋಮಶೇಖರ್ ಕೌಡಿ ಹೇಳಿದರು.
ಹೀಗಾಗಿ ಸರ್ಕಾರ ಈಗಾಗಲೇ ಘೋಷಣೆ ಮಾಡಿದ 2 ಸಾವಿರ ರೂ.ಗಳ ಬದಲಾಗಿ 10 ಸಾವಿರ ರೂ. ನೀಡಬೇಕು. ಜೊತೆಗೆ ಸಮಗ್ರ ದಿನಸಿ ಕಿಟ್ಗಳು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.