ಕರ್ನಾಟಕ

karnataka

ETV Bharat / state

ಪ.ಬಂಗಾಳದಲ್ಲಿ ನಡೆದ ಹಿಂದೂ ಕುಟುಂಬದ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ - ಆರ್​ಎಸ್​ಎಸ್​ ಕಾರ್ಯಕರ್ತ

ಆರ್​ಎಸ್​ಎಸ್​ ಕಾರ್ಯಕರ್ತ ಬಂಡು ಪ್ರಕಾಶ್ ಪಾಲ್ ಮತ್ತು ಅವರ ಗರ್ಭಿಣಿ ಪತ್ನಿಯನ್ನು ಹಾಗೂ 8 ವರ್ಷದ ಮಗುವಿನ ಬರ್ಬರ ಹತ್ಯೆ ಖಂಡಿಸಿ ನಗರದಲ್ಲಿ ವಿಶ್ವಹಿಂದೂ ಪರಿಷತ್​ ಬಜರಂಗದಳ ಪ್ರತಿಭಟನೆ ನಡೆಯಿತು.

ಪ.ಬಂಗಾಳದಲ್ಲಿ ನಡೆದ ಹಿಂದು ಕುಟುಂಬದ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ

By

Published : Oct 18, 2019, 7:07 PM IST

ಬೆಳಗಾವಿ:ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂದೂ ಕುಟುಂಬದ ಹತ್ಯೆಯನ್ನು ಖಂಡಿಸಿ, ಹತ್ಯೆಕೋರರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್​ ಬಜರಂಗದಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ಪ.ಬಂಗಾಳದಲ್ಲಿ ನಡೆದ ಹಿಂದೂ ಕುಟುಂಬದ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ

ನಗರದ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಿದ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಅಲ್ಲಿನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details