ಕರ್ನಾಟಕ

karnataka

ETV Bharat / state

ಕಾಗವಾಡದಲ್ಲಿ ​​​ ರಣಕಹಳೆ ಮೊಳಗಿಸಲು ಹೆಚ್​ಡಿಕೆ ಸನ್ನದ್ಧ.. - By election

ಉಪಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಮೂರು ಪಕ್ಷಗಳು ಸಹ ತಮ್ಮ ಅಭ್ಯರ್ಥಿಗಳನ್ನು ಗೆಲುವು ಎಂಬ ಕುದುರೆ ಏರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ಇಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಗವಾಡ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ.

stage
ಹೆಚ್​​.ಡಿ.ಕೆ ಆಗಮನಕ್ಕೆ ಸಜ್ಜಾಗ್ತಿದೆ ವೇದಿಕೆ

By

Published : Nov 30, 2019, 12:38 PM IST

ಚಿಕ್ಕೋಡಿ:ಕರ್ನಾಟಕದಲ್ಲಿ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆ‌ ಕಾಗವಾಡ ಮತಕ್ಷೇತ್ರದಲ್ಲಿ ಇಂದು ಜೆಡಿಎಸ್ ರಣಕಹಳೆ ಮೊಳಗಿಸಲಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ನಡೆಯಲಿರುವ ಜೆಡಿಎಸ್ ಸಮಾವೇಶಕ್ಕೆ ವೇದಿಕೆ ಸಿದ್ದಗೊಳ್ಳುತ್ತಿದೆ.

ಹೆಚ್​​ಡಿಕೆ ಆಗಮನಕ್ಕೆ ಸಜ್ಜಾಗ್ತಿದೆ ವೇದಿಕೆ

ಕಾಗವಾಡ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತೂಗಶೆಟ್ಟಿ ಪರ ಪ್ರಚಾರಕ್ಕೆ ಇಂದು ಹೆಚ್.ಡಿ.ಕುಮಾರಸ್ವಾಮಿ ಕಾಗವಾಡ ಕ್ಷೇತ್ರದಲ್ಲಿ ಮತಬೇಟೆ ನಡಸಲಿದ್ದು, ಮಲಾಬಾದ್, ಮಧಭಾವಿ, ಐನಾಪೂರ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ.

ABOUT THE AUTHOR

...view details